ರಾಮನಗರ:
“ಕೆಲವರು ಒಳ್ಳೆಯವರಂತೆ ಸಮಾಜಕ್ಕೆ ಬಿಂಬಿಸಿ ತೋರಿಸಿದ್ದಾರೆ. ಅಂಥವರ ಸತ್ಯವನ್ನು ಹೊರ ತರುತ್ತೇನೆ” ಇದು ಸಿಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಸಿಡಿಸಿದ ಹೊಸ ಬಾಂಬ್ ನಿಂದ ಚನ್ನಪಟ್ಟಣ ಚುನಾವಣಾ ಕ್ಷೇತ್ರ ರಂಗೇರುತ್ತಿದೆ.ಒಂದೆಡೆ ಚನ್ನಪಟ್ಟಣದಲ್ಲಿ ಟಿಕೆಟ್ ಪಡೆಯಲು ಸಿಪಿವೈ ಹರಸಾಹಸ ಪಡುತಿದ್ದರೆ ಮತ್ತೊಂದೆಡೆ ಅಪ್ಪನಿಂದ ಕೆಲ ವರ್ಷಗಳಿಂದ ಅಂತರ ಕಾಯ್ದುಕೊಂಡಿರುವ ಪುತ್ರಿ ನಿಶಾ ಯೋಗೀಶ್ವರ್ ಈ ರೀತಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ .
ಇನ್ನು ಕೆಲ ವೈಯಕ್ತಕ ಕಾರಣಗಳಿಂದ ಬೇರೆಯಾಗಿರುವ ಯೋಗಿಶ್ವರ್ ಮತ್ತು ಮಗಳ ನಡುವೆ ಸದ್ಯ ದೊಡ್ಡ ತಡೆಗೋಡೆಯೇ ನಿರ್ಮಾಣವಾಗಿದೆ ಆದರೆ ಇಲ್ಲಿಯವರೆಗೂ ಎಲ್ಲಿಯೂ ಬಾಯಿಬಿಡದ ನಿಶಾ ಅವರು ಈಗ ಹೇಳಿರುವ ಈ ವಿಷಯ ಯಾವ ತಿರುವು ಪಡೆಯುತ್ತದೆ ಎಂದು ಕಾದು ನೋಡಬೇಕಾಆಗಿದೆ .