ಅಗ್ನಿಪಥ್ ಯೋಜನೆ : ಚುನಾವಣಾ ಆಯೋಗದ ನಿರ್ದೇಶನ ತಪ್ಪು : ಪಿ ಚಿದಂಬರಂ

ನವದೆಹಲಿ: 

    ಅಗ್ನಿಪಥ್ ಯೋಜನೆಯಲ್ಲಿ ರಾಜಕೀಯ ಮಾಡದಂತೆ ಚುನಾವಣಾ ಆಯೋಗವು ತಮ್ಮ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು. ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಗುರುವಾರ ಪ್ರತಿಪಾದಿಸಿದ್ದಾರೆ.

   ಚುನಾವಣಾ ಆಯೋಗವು ಬುಧವಾರ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಜಾತಿ, ಸಮುದಾಯ, ಭಾಷೆ ಮತ್ತು ಧರ್ಮದ ಆಧಾರದ ಮೇಲೆ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿತ್ತು.

   ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸದಂತೆ ಮತ್ತು ಸಶಸ್ತ್ರ ಪಡೆಗಳ ಸಾಮಾಜಿಕ-ಆರ್ಥಿಕ ಸಂಯೋಜನೆಯ ಬಗ್ಗೆ ಸಂಭಾವ್ಯ ವಿಭಜಕ ಹೇಳಿಕೆಗಳನ್ನು ನೀಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ಕೇಳಿಕೊಂಡಿದೆ. ಅಲ್ಲದೆ ಅಗ್ನಿಪಥ್ ಯೋಜನೆ ಕುರಿತು ಕಾಂಗ್ರೆಸ್ ಉನ್ನತ ನಾಯಕರು ಮಾಡಿದ ಟೀಕೆಗಳನ್ನು ಆಯೋಗ ಉಲ್ಲೇಖಿಸಿದೆ.

   ಈ ಕುರಿತು X ನಲ್ಲಿ ಪ್ರತಿಕ್ರಿಯಿಸಿರುವ, ಚಿದಂಬರಂ ಅವರು, ಅಗ್ನಿಪಥ್ ಯೋಜನೆಯನ್ನು ‘ರಾಜಕೀಯಗೊಳಿಸಬೇಡಿ’ ಎಂದು ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷಕ್ಕೆ ನಿರ್ದೇಶನ ನೀಡುವುದು ಅತ್ಯಂತ ತಪ್ಪು ಎಂದು ಹೇಳಿದ್ದಾರೆ.

   “ರಾಜಕೀಯಗೊಳಿಸುವುದು’ ಎಂದರೆ ಏನು? ಇಸಿಐ ಪ್ರಕಾರ ‘ಟೀಕೆ’ ಮಾಡುವುದು ರಾಜಕೀಯಗೊಳಿಸದಂತೆ ಎಂದರ್ಥವೇ? ಅಗ್ನಿವೀರ್ ಒಂದು ಯೋಜನೆ ಮತ್ತು ಸರ್ಕಾರದ ಒಂದು ನೀತಿಯಾಗಿದೆ. ಸರ್ಕಾರದ ನೀತಿಯನ್ನು ಟೀಕಿಸುವುದು ಮತ್ತು ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಹೇಳುವುದು ವಿರೋಧ ಪಕ್ಷದ ಹಕ್ಕು ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.

   “ಅಗ್ನಿವೀರ್‌ ಯೋಜನೆಯನ್ನು ಸೇನೆಯೇ ವಿರೋಧಿಸಿದೆ. ಆದರೂ ಈ ಯೋಜನೆಯನ್ನು ಸರ್ಕಾರ ಸೇನೆಯ ಮೇಲೆ ಬಲವಂತವಾಗಿ ಹೇರಿದೆ ಮತ್ತು ಅದು ತಪ್ಪು. ಹೀಗಾಗಿ ಅಗ್ನಿವೀರ್ ಯೋಜನೆ ರದ್ದಾಗಬೇಕು ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap