‘ದೇವೇಗೌಡರೇ ನನ್ನನ್ನು JDS ನಿಂದ ಉಚ್ಚಾಟಿಸಿದರು’- ಸಿದ್ದು

ಕಲಬುರ್ಗಿ:

      ಜೆಡಿಎಸ್ ಪಕ್ಷ ಬಿಟ್ಟು ನಾನು ಹೊರಬಂದಿಲ್ಲ, ದೇವೇಗೌಡರೇ ನನ್ನನ್ನು ಹೊರ ಹಾಕಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

      ಪಕ್ಷಾಂತರ ವಿಚಾರವಾಗಿ ಕಾಂಗ್ರೆಸ್‌, ಬಿಜೆಪಿ ನಾಯಕರ ನಡುವೆ ವಾಗ್ಸಮರ ಮುಂದುವರಿದಿದ್ದು, ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಹೋಗಿರಲಿಲ್ವೆ ಎಂದು ಪ್ರಶ್ನಿಸಿದ್ದ ಆರ್‌.ಅಶೋಕ್‌ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತಿರುಗೇಟು ನೀಡಿದ್ದಾರೆ.

      ಚಿಂಚೋಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಅಹಿಂದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ  ದೇವೇಗೌಡರು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ್ದರು. ನಾನು ಪಕ್ಷ ಬಿಟ್ಟಿರಲಿಲ್ಲ. ನನಗೂ ಉಮೇಶ್‌ ಜಾಧವ್‌ಗೆ ಇರುವ ವ್ಯತ್ಯಾಸ ಇಷ್ಟೆ ಎಂದರು.

      ಚಿಂಚೋಳಿಯಲ್ಲಿ ಉಮೇಶ್‌ ಜಾಧವ್‌ ಅವರಿಗೆ ಸಿದ್ದರಾಮಯ್ಯ ಗೋಮುಖ ವ್ಯಾಘ್ರ ಎಂದು ಕರೆದಿದ್ದರು. ಪಕ್ಷಕ್ಕೆ ದ್ರೋಹ ಬಗೆದ ವ್ಯಕ್ತಿ ಎಂದು ಏಕವಚನದಲ್ಲೇ ತೀವ್ರ ವಾಗ್ಧಾಳಿ ನಡೆಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap