ತುಮಕೂರು
ಕೊರಟಗೆರೆ ವಿಧಾನ ಸಭಾ ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕಡಾ. ಜಿ. ಪರಮೇಶ್ವರ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಗೂ ಮುನ್ನ ಟೆಂಪಲ್ ರನ್ ಮಾಡಿದ ಪರಮೇಶ್ವರ ಅವರ ಸಿದ್ಧ ರಬೆಟ್ಟ ಬೆಳ್ಳಾವಿ ಸೇರಿ ವಿವಿಧ ಮಠಗಳಿಗೂ ಭೇಟಿಕೊಟ್ಟು ಆಶೀರ್ವಾದ ಪಡೆದರು
ನಾಮಪತ್ರ ಸಲ್ಲಿಕೆ ಗೂ ಮುನ್ನ ಪತ್ನಿ ಕನ್ನಿಕಾ ಪರಮೇಶ್ವರ ಅವರು ಮನೆಯಲ್ಲಿ ಆರತಿ ಬೆಳಗಿ ಶುಭ ಕೋರಿದರು. ಉಮೇದುವಾರಿಕೆ ಗೂ ಮುನ್ನ ಬೃಹತ್ ರೋಡ್ ಶೋ ನಡೆಸಿದ ಪರಮೇಶ್ವರ ಅವರಿಗೆ ಸಾವಿರಾರು ಬೆಂಬಲಿಗರು ಕಾರ್ಯಕರ್ತರು ಸಾಥ್ ಕೊಟ್ಟರು. ಪರಮೇಶ್ವರ ಪರ ಜೈಕಾರ ಕೂಗುತ್ತಾ ಗೆಲುವಿಗಾಗಿ ಕಾರ್ಯಕರ್ತರು ದೇವಾಲಯದಲ್ಲಿ ಈಡುಗಾಯಿ ಸಹ ಹೊಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ