ಪಾವಗಡ :
ಬೆಳಗಿನ ಜಾವ ಮಮಜಿನಿಂದ ಕೂಡಿದ್ದ ರಸ್ತೆಗಳಲ್ಲಿ ದಾರಿ ಕಾಣದೇ ಪಟ್ಟಣದ ತುಮಕೂರು ರಸ್ತೆಯ ಕಣಿವೇ ಲಕ್ಷ್ಮಿ ನರಸಿಂಹ ದೇವಾಲಯದ ಬಳಿ ಹಾಗೂ ಬಳ್ಳಾರಿ ರಸ್ತೆಯಲ್ಲಿ ಪ್ರತ್ಯೇಕ ಎರಡು ಲಾರಿಗಳು ವಿಬಜಕಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಶುಕ್ರವಾರ ಬೆಳಗಿನ ಜಾವ 4 ರಿಂದ 5 ಗಂಟೆ ಸಮಯದಲ್ಲಿ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು, ಹಾಗೂ ಮಂಜು ಹೆಚ್ಚಾಗಿ ಬೀಳುತ್ತಿರುವ ಕಾರಣ ಕಲ್ಯಾಣದುರ್ಗದ ಕಡೆಯಿಂದ ಭತ್ತವನ್ನು ತುಂಬಿಕೊಂಡು ಬಂದ ಲಾರಿ ಮಂಜಿನಿಂದ ರಸ್ತೆ ಕಾಣದೇ ರಸ್ತೆ ಮದ್ಯೆದಲ್ಲಿದ ಡಿವೈಡರ್ ಡಿಕ್ಕಿಯಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ತುಮಕೂರು ರಸ್ತೆಯ ಕಣಿವೇ ಲಕ್ಷ್ಮೀ ನರಸಿಂಹ ದೇವಾಲಯದ ಬಳಿ ಮತ್ತೂಂದು ಲಾರಿ ರಸ್ತೆ ಮದ್ಯೆದಲ್ಲಿದ್ದ ಡಿವೈಡರ್ಗೆ ಡಿಕ್ಕಿಯಾಗಿದ್ದು, ಇಲ್ಲಿಯೂ ಕೂಡ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ಆದರೆ ದೇವಾಸ್ಥಾನದ ಬಳಿ ಡಿವೈಡರ್ ಲಾರಿ ಡಿಕ್ಕಿಯಾಗಿರುವುದು ಎರಡನೇ ಅಪಘಾತವಾಗಿದ್ದು ಪಟ್ಟಣಕ್ಕೆ ವಾಹನಗಳು ಆಗಮಿಸಿದಾಗ ರಾತ್ರಿ ವೇಳೆ ರಸ್ತೆ ಉಬ್ಬುಗಳು, ಡಿವೈಡರ್ ಆಳವಡಿಸಿರುವ ಬಗ್ಗೆ ಹಾಗೂ ರಸ್ತೆ ತಿರುವುಗಳ ಬಗ್ಗೆ ಯಾವುದೇ ಫಲಕಗಳನ್ನು ಆಳವಡಿಸದ ಕಾರಣ ಪದೇ ಪದೇ ಪಟ್ಟಣದಲ್ಲಿ ಅಪಘಾತಗಳು ಹೆಚ್ಚಾಗುತ್ತವೆ ಎಂದು ಕೇಶಿಪ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ