ಮಿಡಿಗೇಶಿ :
ಮಧುಗಿರಿ ತಾಲ್ಲೂಕಿನ ಐ.ಡಿಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಪದ್ಮ ಮೆಡಿಕಲ್ ಷಾಪ್ನಲ್ಲಿ ಮಹಿಳೆಯೋರ್ವರು ಮಗುವಿಗೆಂದು ಗ್ರ್ರೈಪ್ವಾಟರ್ ಕೇಳಿದರೆ, ಮೆಡಿಕಲ್ ಷಾಪ್ ಮಾಲೀಕ ನಾಗಭೂಷಣ ರೆಡ್ಡಿಯ ಪತ್ನಿ ಗ್ರೈಪ್ ವಾಟರ್ ಬದಲಿಗೆ ಪಾಯಿಸನ್ ಬಾಟಲಿಯೊಂದನ್ನು ಕೊಟ್ಟು ಹಣ ಪಡೆದಿದ್ದಾರೆ.
ಮಹಿಳೆ ಮನೆಗೆ ಹೋಗಿ ಬಾಟಲಿಯ ಮುಚ್ಚಳ ತೆರೆದು ನೋಡಿದಾಗ ಪಾಯಿಸನ್ (ವಿಷ) ಎಂದು ತಿಳಿದು, ಮನೆಯಲ್ಲಿದ್ದ ಪುರುಷರಿಗೆ ತೋರಿಸಿದಾಗ, ಇದೊಂದು ವಿಷದ ಬಾಟಲಿ ಎಂದು ದೃಢವಾಗಿದೆ. ಮೆಡಿಕಲ್ ಷಾಪ್ಗೆ ಹಿಂತಿರುಗಿ ವಿಷಯ ಪ್ರಸ್ತಾಪಿಸಿದಾಗ ಗ್ರೈಪ್ ವಟರ್ ಬದಲಿಗೆ ವಿಷದ ಬಾಟಲಿ ಮಾರಾಟ ಮಾಡಿದ್ದ ಔಷಧಿ ಅಂಗಡಿಯ ಮಹಿಳೆ ತಾನು ಮಾಡಿದ ಮಣ್ಣು ತಿನ್ನುವ ಅಚಾತುರ್ಯದ ತಪ್ಪನ್ನು ಮರೆಮಾಚಿ, ಹಣ ತೆತ್ತು ಔಷಧಿ ಕೊಂಡುಕೊಂಡಿದ್ದ ಮಹಿಳೆಯ ಮೇಲೆಯೆ ವಿಷದ ಬಾಟಲಿನ ಮುಚ್ಚಳ ತೆರೆದಿರುವ ಬಗ್ಗೆ ಗಲಾಟೆ ಮಾಡಿರುತ್ತಾಳೆ.
ಈ ಬಗ್ಗೆ ದೂರವಾಣಿ ಮೂಲಕ ಮಿಡಿಗೇಶಿ ಪೋಲೀಸ್ ಠಾಣೆಗೆ ದೂರು ನೀಡಿದಾಗ, ಪೊಲೀಸ್ ಇಲಾಖೆಯ ಸಿಬ್ಬಂದಿಯೋರ್ವರು ಫೋನಿನ ಮೂಲಕವೆ ಮೆಡಿಕಲ್ ಷಾಪ್ ಮಾಲೀಕ ನಾಗಭೂಷಣ ರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಅ. 23 ರ ಶನಿವಾರ ಬೆಳಗ್ಗೆ 9-30 ಗಂಟೆಗೆ ಸರಿಯಾಗಿ ಠಾಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಜೊತೆಗೆ ಔಷಧಿ ಕೊಂಡುಕೊಂಡಿದ್ದವರಿಗೆ ಸಹ ಠಾಣೆಗೆ ಬರುವಂತೆ ಹೇಳಿರುವುದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದರಿ ಘಟನೆ ಬಗ್ಗೆ ಸಂಬಂಧಿಸಿದ ಆರೋಗ್ಯ ಇಲಾಖೆ, ಡ್ರಗ್ಸ್ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಪ್ರಜಾಪ್ರಗತಿ facebook page ಲೈಕ್ ಮಾಡಿ
