ತುಮಕೂರು:
ಬಿಪಿಎಲ್ ಕುಟುಂಬಕ್ಕೆ 1.50 ಲಕ್ಷ ಪರಿಹಾರ | ಎಪಿಎಲ್ನವರಿಗೆ 50 ಸಾವಿರ ಮಂಜೂರು
ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟ 996 ಮಂದಿಗೆ ಕೋವಿಡ್ ಪರಿಹಾರ ಮಂಜೂರಾಗಿದ್ದು, ಚೆಕ್ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ 62, ಗುಬ್ಬಿ 73, ಕೊರಟಗೆರೆ 74, ಕುಣಿಗಲ್ 43, ಮಧುಗಿರಿ 93, ಪಾವಗಡ 90, ಸಿರಾ 67, ತಿಪಟೂರು 64, ತುಮಕೂರು 379 ಹಾಗೂ ತುರುವೇಕೆರೆಯಲ್ಲಿ 51 ಮಂದಿ ಸಂತಸ್ತ ಕುಟುಂಬಗಳಿಗೆ ಪರಿಹಾರ ದೊರೆತಿದ್ದು, ಬಿಪಿಎಲ್ ಕುಟುಂಬಗಳಿಗೆ 670 ಮಂದಿಗೆ ಹಾಗೂ ಎಪಿಎಲ್ ಕುಟುಂಬಗಳ 326 ಮಂದಿಗೆ ಮಂದಿಗೆ ಪರಿಹಾರ ಲಭ್ಯವಾಗಿದೆ.
ಬಿಪಿಎಲ್ ಕುಟುಂಬದವರಿಗೆ ಕೇಂದ್ರದಿಂದ 50 ಸಾವಿರ, ರಾಜ್ಯದ 1 ಲಕ್ಷ ಸೇರಿ 1.50 ಲಕ್ಷ ಪರಿಹಾರ ಮಂಜೂರಾಗಿದ್ದು, ಎಪಿಎಲ್ ಕುಟುಂಬಗಳಿಗೆ ಕೇಂದ್ರದ 50 ಸಾವಿರ ಕೊಡಲಾಗುತ್ತಿದೆ. ಪಡಿತರಚೀಟಿಯಲ್ಲಿ ನಮೂದಾಗಿರುವ ಕುಟುಂಬದ ಅಧಿಕೃತ ವಾರಸುದಾರರಿಗೆ ಪರಿಹಾರ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಯಾವುದೇ ಗ್ರಾಮಗಳು ಸ್ಮಶಾನ ಕೊರತೆ ಎದುರಿಸಬಾರದೆಂದು ಜಿಲ್ಲಾಧಿಕಾರಿಗಳು ಸಮೀಕ್ಷೆ ಮಾಡಿಸಿ ಸರಕಾರಿ ಜಾಗವನ್ನು ಹುಡುಕಿ 611 ಗ್ರಾಮಗಳಿಗೆ ಸ್ಮಶಾನ ಜಾಗವನ್ನು ಮಂಜೂರು ಮಾಡಲಾಗಿದೆ. 6 ತಾಲೂಕುಗಳು ಸ್ಮಶಾನ ಮುಕ್ತ ತಾಲೂಕಿನೆಸಿವೆ. ಸ್ಮಶಾನ ಕೊರತೆ ಯಿರುವ ಉಳಿದೆಡೆಯೂ ಬೇಗ ಸ್ಮಶಾನ ಮಂಜೂರು ಮಾಡಲಾಗುವುದು.
–ಪೂಜಾರ ವೀರಮಲ್ಲಪ್ಪ, ಅಪರ ಜಿಲ್ಲಾಧಿಕಾರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
