ಏರುತ್ತಿದೆ ಬಿಸಿಲು : ಹಣ್ಣುಗಳು ದುಬಾರಿ

ತುಮಕೂರು:

ದಿನೇ ದಿನೇ ಬಿಸಿಲು ಏರುತ್ತಿರುವುದರಿಂದ ಹಣ್ಣುಗಳಿಗೆ ಬೇಡಿಕೆ ಹೆಚ್ಚಿ ದರವೂ ಏರುತ್ತಿದೆ. ಸೊಪ್ಪು-ತರಕಾರಿ ಬೆಳೆಗೆ ಬೇಕಾದ ಶುಷ್ಕ ವಾತಾವರಣ ಇರುವುದರಿಂದ ಈ ವಾರವೂ ಸಹ ಸೊಪ್ಪು-ತರಕಾರಿಗಳು ಅಗ್ಗದ ಬೆಲೆಗೆ ದೊರೆಯುತ್ತಿವೆ.

ಆದರೆ ಹಸಿ ಮೆಣಸಿನಕಾಯಿ ದರ ಇಳಿಯುವಂತೆ ಕಾಣುತ್ತಿಲ್ಲ. ಈ ಹಿಂದೆ ಶತಕ ಬಾರಿಸಿದ್ದ ಟೊಮೆಟೊ ಪ್ರಸ್ತುತ ಕೆ.ಜಿ. 5-20 ರೂ.ಗೆ ಇಳಿದಿದೆ. 400 ರೂ. ದಾಟಿದ್ದ ನುಗ್ಗೆಕಾಯಿ ಬೆಲೆ 200 ರೂ. ಗೆ ಇಳಿದಿದೆ.

ಟೊಮೆಟೊ ಅಗ್ಗ :

ಕಳೆದ ವಾರ 10-20 ರೂ. ಇದ್ದ ಟೊಮೆಟೊ ದರ ಈ ವಾರ 5-20 ರೂ. ಗೆ ಇಳಿದಿದೆ. ಮೂಲಂಗಿ-20 ರೂ. ನಿಂದ 10 ರೂ.ಗೆ ಇಳಿದಿವೆ. ಬೀನ್ಸ್-50 ರೂ. ನಿಂದ 30-40 ರೂ. ಗೆ, ಕ್ಯಾರೇಟ್-60 ರೂ. ನಿಂದ 50 ರೂ. ಗೆ, ಬೀಟ್ರೂಟ್-50 ರೂ. ನಿಂದ 40 ರೂ. ಗೆ ಇಳಿದಿವೆ. ಮಿಕ್ಕಂತೆ ಪಟ್ಲಿಕಾಯಿ-30 ರೂ., ಹೀರೆಕಾಯಿ-40 ರೂ., ಬೆಂಡೆಕಾಯಿ-50 ರೂ., ಗೋರಿಕಾಯಿ-50 ರೂ. ಅವರೆಕಾಯಿ-30-40 ರೂ.,

ಹಸಿ ಬಟಾಣಿ-50-60 ರೂ., ಹಾಗೂ ನಾಟಿ ಕೊತ್ತಂಬರಿ-40 ರೂ., ಫಾರಮ್ ಕೊತ್ತಂಬರಿ-20 ರೂ., ಸಬ್ಸಿಗೆ-40 ರೂ., ದಂಟು-40 ರೂ., ಪಾಲಕ್-40 ರೂ., ಪುದೀನಾ-40 ರೂ., ಚಕ್ಕೊತ-40 ರೂ., ಮೆಂತ್ಯೆ ಸೊಪ್ಪು-30 ರೂ. ನಂತೆ ಮಾರಾಟವಾಗುತ್ತಿವೆ. ಸೊಪ್ಪು-ತರಕಾರಿ ಬೆಳೆಗೆ ಹಿತಕರ ಹವಮಾನ ಇರುವುದು ಹಾಗೂ ಈ ಸಲ ಉತ್ತಮ ಮಳೆಯಾಗಿರುವುದರಿಂದ ರೈತರ ಬೋರ್‍ವೆಲ್‍ಗಳಲ್ಲಿ ಅಂತರ್ಜಲ ವೃದ್ಧಿಸಿದ್ದು, ಮಾರುಕಟ್ಟೆಗೆ ಹೇರಳ ಹೊಸ ಮಾಲು ಬರುತ್ತಿದ್ದು ತರಕಾರಿ-ಸೊಪ್ಪಿನ ಬೆಲೆಗಳು ಕಡಿಮೆಯಾಗಲು ಕಾರಣವಾಗಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ತರಕಾರಿ ವ್ಯಾಪಾರಿ ಪುನೀತ್.

ಹಣ್ಣುಗಳ ಬೆಲೆ ದುಬಾರಿ :

ಬಿಸಿಲಿನ ಝಳಕ್ಕೆ ಗ್ರಾಹಕ ಹಣ್ಣುಗಳ ಮೊರೆ ಹೋಗಿದ್ದು, ಹಣ್ಣುಗಳಿಗೆ ಬೇಡಿಕೆ ಹಚ್ಚಿ ಬೆಲೆಯೂ ಏರಿದೆ. ಸೇಬು, ದಾಳಿಂಬೆ, ಮೋಸಂಬಿ, ಕಿತ್ತಳೆ, ಕಲ್ಲಂಗಡಿ, ಕರಬೂಜ ಬೆಲೆಗಳು ಈ ವಾರ ಏರಿಕೆ ಕಂಡಿವೆ. ಸದ್ಯ ದ್ರಾಕ್ಷಿ ಸೀಸನ್ ಇದ್ದು, ಹಸಿರು ಬಣ್ಣದ ಸೀಡ್‍ಲೆಸ್ ದ್ರಾಕ್ಷಿ ಕೆಜಿ ರೂ. 80 ಕ್ಕೆ ಮಾರಾಟವಾಗುತ್ತಿದೆ. ಪಚ್ಚೆ ಬಾಳೆ, ಪುಟ್ಟ ಬಾಳೆ ಬೆಲೆ ಯಥಾಸ್ಥಿತಿ ಇದೆ.

ಮುಂದಿನ ದಿನಗಳಲ್ಲಿ ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳು ಮಾರುಕಟ್ಟೆಗೆ ಹೆಚ್ಚು ಆವಕವಾಗುವುದರಿಂದ ಈ ಹಣ್ಣುಗಳ ಬೆಲೆಗಳು ಇಳಿಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್‍ನ ಮಾಲೀಕ ವೆಂಕಟೇಶ್.

ಕೋಳಿ ಏರಿಕೆ : ಮೊಟ್ಟೆ ಇಳಿಕೆ :

ಕಳೆದ ವಾರ 10 ರೂ. ಇಳಿಕೆಯಾಗಿದ್ದ ಕೋಳಿ ಮಾಂಸದ ಬೆಲೆ ಈ ವಾರ 10 ರೂ. ಏರಿಕೆಯಾಗಿದೆ. ಫಾರಂ ಕೋಳಿ ಮಾಂಸದ ಬೆಲೆ ಕೆ.ಜಿ.ಗೆ 110 ರೂ. ನಿಂದ 120 ರೂ. ಗೆ ಹಾಗೂ ಬ್ರಾಯ್ಲರ್ ಕೋಳಿ ಮಾಂಸ ಕೆ.ಜಿ.ಗೆ 120 ರೂ. ನಿಂದ 130 ರೂ.ಗೆ ದರ ಏರಿದೆ.

ಮೊಟ್ಟೆ 1 ಡಜನ್ ಗೆ 64 ರೂ. ನಿಂದ 62 ರೂ.ಗೆ ಇಳಿದಿದೆ. ಶಿವರಾತ್ರಿ ಹಬ್ಬದ ನಂತರ ಹಳ್ಳಿ ಬಾನಗಳು ಹಾಗೂ ಗ್ರಾಮ ದೇವತೆಗಳ ಜಾತ್ರೆಗಳು ನಡೆಯುವುದರಿಂದ ಕೋಳಿ ಮಾಂಸದ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ ಎನ್ನುತ್ತಾರೆ ಹುಳಿಯಾರಿನ ಕೋಳಿ ವರ್ತಕ ಕರವೇ ಶ್ರೀನಿವಾಸ್.

 

ಮೆಣಸಿನಕಾಯಿ ಮಾಲೆ ಇಲ್ಲ :

ಈ ಹಿಂದೆ ಬಿದ್ದ ಮಳೆಯಿಂದಾಗಿ ಮೆಣಸಿನಗಿಡಗಳು ನಾಶವಾಗಿದ್ದು ಬೆಳೆ ಇಲ್ಲದಾಗಿದೆ. ಸದ್ಯ ಮಾರುಕಟ್ಟೆಗೆ ಹಾಸನ ಸುತ್ತಮುತ್ತಲ ಗ್ರಾಮಗಳಿಂದ ಮೆಣಸಿನಕಾಯಿ ಬರುತ್ತಿದ್ದು, ಬೇಡಿಕೆಗಿಂತ ಮಾಲು ಕಡಿಮೆಯೆ ಆವಕವಾಗುತ್ತಿದೆ. ಆದ್ದರಿಂದ ಬೆಲೆ ಏರುತ್ತಿದೆ.

ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯ ಶಿರಾ, ಸಮೀಪದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಭಾಗಗಳ ಗ್ರಾಮಗಳಿಂದ ಮಾರುಕಟ್ಟೆಗೆ ಹೆಚ್ಚು ಮೆಣಸಿನಕಾಯಿ ಬರುವುದರಿಂದ ಇನ್ನೂ 2 ವಾರಗಳ ನಂತರ ಬೆಲೆ ನಿಯಂತ್ರಣಕ್ಕೆ ಬರಲಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ತರಕಾರಿ ಸಗಟು ವರ್ತಕ ವಾಸು.

ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)

ಸೇಬು             – 140-160
ದಾಳಿಂಬೆ          -160-180
ಮೊಸಂಬಿ           – 80
ನಾಟಿ ಕಿತ್ತಳೆ         -80
ಸಪೋಟ            – 40
ಏಲಕ್ಕಿ ಬಾಳೆ        – 40
ಪಚ್ಚ ಬಾಳೆ           – 20
ಪಪ್ಪಾಯ              -30
ಕಲ್ಲಂಗಡಿ             -30
ಕರಬೂಜ            -40
ಸೀಬೆ                -60
ಪೈನಾಪಲ್           -50
ದ್ರಾಕ್ಷಿ                -80

ತರಕಾರಿ (ಬೆಲೆ ಕೆ.ಜಿ ರೂ.)

ಟೊಮೆಟೊ         05-20
ಈರುಳ್ಳಿ            35-40
ಆಲೂಗಡ್ಡೆ           25-30
ಬೀನ್ಸ್             30-40
ಕ್ಯಾರೆಟ್             50
ಬೀಟ್ರೂಟ್           40
ಮೂಲಂಗಿ           10
ಗಡ್ಡೆಕೋಸು          30
ನುಗ್ಗೆಕಾಯಿ          200
ಬದನೆಕಾಯಿ        20-25
ಎಲೆಕೋಸು         40
ಹೂಕೋಸು            25
ಹಸಿ ಮೆಣಸಿನಕಾಯಿ  80
ಕ್ಯಾಪ್ಸಿಕಂ             50

ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ –                 130
ಫಾರಂ –                  120
ನಾಟಿ ಕೋಳಿ ಮಾಂಸ-   250-300
ಮಟನ್-                  600-650
ಮೀನು (ಸಾಮಾನ್ಯ)  -120-150
ಮೊಟ್ಟೆ
(1 ಡಜನ್) 62

 

ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ   16,400
ಗರಿಷ್ಠ    17,450
ಮಾದರಿ   17,000
ಒಟ್ಟು ಆವಕ–1229.80 ಕ್ವಿಂಟಾಲ್
(2860 ಚೀಲ)

        -ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link