ಶಿರಾ :
ರೈತರೊಬ್ಬರು ತಮ್ಮ ಸುಮಾರು 6 ಎಕರೆ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ಹಾಗೂ ಅಡಕೆ ಗಿಡಗಳು ಆಕಸ್ಮಿಕ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿ ಲಕ್ಷಾಂತರ ರೂ. ನಷ್ಟಗೊಂಡ ಘಟನೆ ತಾಲ್ಲೂಕಿನ ಚೆನ್ನನಕುಂಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಚೆನ್ನನಕುಂಟೆಯ ರೈತ ಗೋವಿಂದರಾಜು ಅವರು ತಮ್ಮ 6 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆ ಹಾಗೂ ಅಡಕೆ ತೋಟ ಬೆಳೆಸಿದ್ದರು.
ಜಮೀನಿನಲ್ಲಿ ಯಾರೂ ಇಲ್ಲದಂತಹ ಸಂದರ್ಭದಲ್ಲಿ ಬೆಳೆಯ ನಡುವೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ಪರಿಣಾಮ ಫಸಲಿಗೆ ಬಂದಿದ್ದ ದಾಳಿಂಬೆ ಹಾಗೂ ಅಡಕೆ ಗಿಡಗಳು ಸುಟ್ಟು ಭಸ್ಮಗೊಂಡಿವೆ. 2 ಟಿಲ್ಲರ್ಗಳು ಹಾಗೂ ಇಡೀ ಹೊಲದಲ್ಲಿ ಅಳವಡಿಲಾಗಿದ್ದ ಹನಿ ನೀರಾವರಿಯ ಎಲ್ಲಾ ಉಪಕರಣಗಳು ಬೆಂಕಿಯಿಂದ ನಾಶಗೊಂಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
