ಧಾರ್ಮಿಕ ಆಚರಣೆಗಳ ಮೇಲೆ ಕೊರೋನಾ ಕರಿ ನೆರಳು

ಗುಬ್ಬಿ :

      ಕೊರೋನಾ ಮಹಾಮಾರಿಯಿಂದ ಆರ್ಥಿಕವಾಗಿ ಕುಗ್ಗಿಹೋಗಿರುವ ಜನರು ದಿಕ್ಕೆಟ್ಟಿದ್ದು, ಹಬ್ಬ, ಧಾರ್ಮಿಕ ಆಚರಣೆಗಳನ್ನು ಸರಳವಾಗಿ ಆಚರಿಸುವಂತಾಗಿದೆ. ಇದರಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಅಂತ ಭೇದ ಭಾವವಿಲ್ಲ. ಎಲ್ಲ ಧರ್ಮಗಳಿಗೂ ಕೊರೋನದ್ದೂ ಒಂದೇ ನೀತಿ.
ತಾಲ್ಲೂಕು ಕೂಡ ಇದರಿಂದ ಹೊರತಾಗಿಲ್ಲ. ಗುಬ್ಬಿ ತಾಲ್ಲೂಕಿನಲ್ಲಿ ಅತಿ ಸಂಭ್ರಮದಿಂದ ಆಚರಿಸುತ್ತಿದ್ದ ಮೊಹರಂ ಕೊನೆಯ ದಿನದ ಧಾರ್ಮಿಕ ವಿಧಿ ವಿಧಾನಗಳು ಕೊರೋನಾ ದಿಂದಾಗಿ ನಿಂತುಹೋಗಿವೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಈ ಹಬ್ಬವನ್ನು ಮುಂದಿನ ಪೀಳಿಗೆ ನೋಡದಂತಾಗಿದೆ.

      ಯಹೂದಿಗಳ ವಿರುದ್ಧ ಧರ್ಮ ಯುದ್ಧವನ್ನು ಮಾಡಿ ಹುತಾತ್ಮರಾದ ಮಹಮ್ಮದ್ ಪೈಗಂಬರರ ಅಕ್ಕನ ಮಕ್ಕಳ ನೆನಪಿನ ಸಂಕೇತವಾಗಿ ಆಚರಿಸುವ ಈ ಹಬ್ಬ ನಿಜವಾಗಿಯೂ ಅರ್ಥಪೂರ್ಣವಾಗಿದೆ. ಹಲವು ಹಿಂದೂಗಳು ಹರಕೆಗಳನ್ನು ಕಟ್ಟಿಕೊಂಡು ಬಾಬಯ್ಯನ ಹೊಂಡಕ್ಕೆ ಇದನ್ನು ಅರ್ಪಿಸುವುದು ಬಹಳ ಕಾಲದಿಂದ ರೂಢಿಯಲ್ಲಿದೆ. ಈ ಸಂದರ್ಭದಲ್ಲಿ ಎಳೆಯ ಮಕ್ಕಳಿಗೆ ಮಸೀದಿ ಚೀಟಿಗಳನ್ನು ಧರಿಸುವುದು, ಅವುಗಳು ಹೆದರಿ ರಚ್ಚೆ ಮಾಡದಂತೆ ಮಾಡುವುದು ನಂಬಿಕೆಯ ಸಂಕೇತವಾಗಿದೆ. ಸಣ್ಣ ಸಣ್ಣ ಮಕ್ಕಳು ಉತ್ತಮ ಪೋಷಾಕುಗಳಲ್ಲಿ ಬಾಬಯ್ಯನ ಮೂರ್ತಿಗಳನ್ನು ಕೊರಳಿಗೆ ನೇತು ಹಾಕಿಕೊಂಡು ಊರಿನ ತುಂಬಾ ಸಂಭ್ರಮದಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ದಿನಗಳು ಈಗ ಬರೀ ನೆನಪಾಗಿ ಉಳಿದಿವೆ.

      ಇತ್ತೀಚ್ಚಿಗೆ ಶಿಕ್ಷಣದಿಂದಲೊ ಅಥವಾ ಕಾಲಘಟ್ಟದ ಅಂತರದಿಂದಲೊ ಎಲ್ಲಾ ಧರ್ಮಗಳ ವಿವಿಧ ಆಚರಣೆಗಳು ವಿರಳವಾಗುತ್ತಿವೆ. ಇದಕ್ಕೆ ಕಾರಣ ಹುಡುಕುತ್ತಾ ಹೋದಲ್ಲಿ ಮುಸ್ಲಿಮರು ಮೊದಲಿಂದಲೂ ಮೂರ್ತಿಪೂಜೆಯನ್ನು ಮಾಡದವರು ಅವರು ನಿರಾಕಾರ ಸ್ವರೂಪದಲ್ಲಿ ಪೈಗಂಬರನನ್ನು ಆರಾದಿಸುವಂತವರು ಈ ಮೊಹರಂ ಆಚರಣೆ ಕೆಲವು ಕಡೆ ಊರಿನ ಎಲ್ಲಾ ಕೋಮಿನವರು ಸೇರಿ ಆಚರಿಸುವ ಹಬ್ಬ ಈ ಮೂರ್ತಿ ಪೂಜೆಯ ಹಬ್ಬ ಕೆಲವು ಹಿಂದೂಗಳಿಂದ ಪ್ರಭಾವಿತವಾಗಿ ನಡೆದುಕೊಂಡು ಬಂದಿರುವುದರಿಂದ ಮೂರ್ತಿಪೂಜೆಯನ್ನು ಒಲ್ಲದ ಮುಸ್ಲಿಮರು ಇದನ್ನು ಕ್ರಮೇಣ ಸರಳ ಹಾಗೂ ವಿರಳ ಆಚರಣೆಗೆ ಸೀಮಿತಗೊಳಿಸುವ ಆಚರಣೆಗೆ ಮುಂದಾಗಿದ್ದಾರೆ ಎನ್ನಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link