ಶಿರಾ :
ತನ್ನನ್ನು ಪ್ರೀತಿಸಲಿಲ್ಲವೆಂಬ ಕಾರಣಕ್ಕೆ ಯುವತಿಯೊಬ್ಬಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಳ್ಳಂಬೆಳ್ಳ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ದೊಡ್ಡಗೂಳ ಸಮೀಪದ ಗೊಲ್ಲರಹಟ್ಟಿಯ ನಿವಾಸಿ ಈರಣ್ಣ ಎಂಬ ಯುವಕ ಇದೇ ಗ್ರಾಮದ ಕಾವ್ಯ ಎಂಬ ಯುವತಿಯನ್ನು ಪ್ರೀತಿಸಲು ಪದೆ ಪದೆ ಒತ್ತಾಯಿಸುತ್ತಿದ್ದನು. ಆಕೆಗೆ ಆತನು ಇಷ್ಷವಿಲ್ಲದಿದ್ದರೂ ಪ್ರೀತಿಸುವಂತೆ ಯುವಕ ಈರಣ್ಣ ಒತ್ತಡ ಏರುತ್ತಿದ್ದ. ಏ.5ರ ಸೋಮವಾರ ಬೆಳಗ್ಗೆ ಯುವತಿಯು ಶಿರಾ ನಗರಕ್ಕೆ ಕಾಲೇಜಿಗೆಂದು ಹೊರಡುವುದನ್ನೇ ಕಾಯುತ್ತಿದ್ದ ಆರೋಪಿ ಈರಣ್ಣ, ದೊಡ್ಡಗೂಳ ಕೆರೆಯ ಹಾದಿಯಲ್ಲಿ ಆಕೆ ಹೋಗುತ್ತಿದ್ದಾಗ ಕುರಿಗಳಿಗಳಿಗೆ ಸೆಡೆ ಸೊಪ್ಪು ತರುವ ನೆಪದಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿ ದೊಡ್ಡಗೂಳ ಕೆರೆಯಲ್ಲಿ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿ ಆಗಿದ್ದನು.
ಈ ಸಂಬಂಧ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಸದರಿ ಕೊಲೆ ಪ್ರಕರಣದ ಪತ್ತೆಗಾಗಿ ಗ್ರಾಮಾಂತರ ಸಿ.ಪಿ.ಐ. ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಪ್ರಕರಣ ದಾಖಲಾದ 24 ಗಂಟೆಯೊಳಗೆ ಏ. 6 ರಂದು ಬೆಳಗ್ಗೆ ಹಲ್ಕೂರು ಕೆರೆಯ ಸೀಮೆಜಾಲಿ ಗಿಡದಲ್ಲಿ ಅಡಗಿ ಕುಳಿತಿದ್ದ ಆರೋಪಿ ಈರಣ್ಣನನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿದ್ದ ಕುಡುಗೋಲು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಸದರಿ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಉದೇಶ್ ಹಾಗೂ ಡಿ.ವೈ.ಎಸ್.ಪಿ. ಕುಮಾರಪ್ಪ, ರವರ ಮಾರ್ಗದರ್ಶನದಲ್ಲಿ ಗ್ರಾ. ಸಿ.ಪಿ.ಐ. ರವಿಕುಮಾರ್, ಪಿ.ಎಸ್.ಐ. ಭಾಸ್ಕರ್, ಪಾಲಾಕ್ಷ ಪ್ರಭು, ಸಿಬ್ಬಂದಿ ರೇಣುಕ, ಸಿ.ಪಿ.ಕಿರಣ್ಕುಮಾರ್, ಹನುಮಂತರಾಯಪ್ಪ, ಮಹೇಶ್, ಪ್ರಸಾದ್, ಬಸವರಾಜು, ಹರೀಶ್ಕುಮಾರ್, ಸುದರ್ಶನ್, ರಂಗನಾಥ್, ಮಂಜುನಾಥ್, ಸಂತೋಷ್ಕುಮಾರ್ ಅವರುಗಳ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷರಾದ ಡಾ.ಕೆ.ವಂಶಿಕೃಷ್ಣ ಅಭಿನಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ