ಬೆಂಗಳೂರು:
ದಸರಾ ಪ್ರಾರಂಭವಾಗಿರುವದರಿಂದ ಹೈಕೋರ್ಟ್ಗೆ ಇಂದಿನಿಂದ(ಅ.13) ಅಕ್ಟೋಬರ್ 21 ರವರೆಗೆ 10 ದಿನಗಳ ಕಾಲ ರಜೆ ಮಾಡಿ ಕೋರ್ಟ್ ಕಲಾಪವನ್ನು ಮುಂದೂಡಲಾಗಿದೆ.
ರಜೆ ಅವಧಿಯಲ್ಲಿ ಧಾರವಾಡ ಹಾಗೂ ಕಲಬುರಗಿ ಪೀಠಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ತುರ್ತು ಅರ್ಜಿಗಳಿದ್ದರೆ ಅವುಗಳನ್ನು ಬೆಂಗಳೂರು ಪೀಠದಲ್ಲಿ ಮಂಡಿಸಬಹುದಾಗಿದೆ.
ಅ.16ರಂದು ಮಂಗಳವಾರ ಒಂದು ದಿನ ಮಾತ್ರ ರಜೆ ಕಾಲದ ನ್ಯಾಯಪೀಠ ಕಾರ್ಯನಿರ್ವಹಿಸಲಿದೆ. ಅಂದು ನ್ಯಾಯಮೂರ್ತಿಗಳಾದ ಎಸ್.ಸುಜಾತ, ಎನ್.ಕೆ.ಸುಧೀಂದ್ರರಾವ್ ಮತ್ತು ಸುನಿಲ್ ದತ್ ಯಾದವ್ ಅವರು ರಜಾ ಪೀಠಗಳಲ್ಲಿ ಕಾರ್ಯನಿರ್ವಹಿಸುವರು ಎಂದು ಹೈಕೋರ್ಟ್ನ ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ