ರಾಮನಗರ:
ನಗರದ ಗಾಂಧಿ ನಗರದಲ್ಲಿ 19 ಹೆಬ್ಬಾವು ಮರಿಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದು, ಇದನ್ನು ವೀಕ್ಷಿಸಲು ಜನ ಮುಗಿಬಿದಿದ್ದಾರೆ.
ಗಾಂಧಿನಗರದ ನಿವಾಸಿ ಗೌತಮ್ ಅವರ ಮನೆಯ ಬಳಿ ಕೊಳಕುಮಂಡಲ ಜಾತಿಗೆ ಸೇರಿದ ಸುಮಾರು 19 ಹಾವಿನ ಮರಿಗಳು ಪತ್ತೆಯಾಗಿದ್ದು, ಅದರಲ್ಲಿ 2 ಹಾವಿನ ಮರಿಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ದೊರಕಿದೆ. ಮರಿಗಳನ್ನು ಹಾಕಿ ತಾಯಿ ಹಾವು ಕಣ್ಮರೆಯಾಗಿದೆ. ತಾಯಿ ಹಾವಿಗಾಗಿ ಹಾವಡಿಗರು ಹುಡುಕಾಡುತ್ತಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಒಮ್ಮೆಲೆ ಇಷ್ಟು ಸಂಖ್ಯೆಯಲ್ಲಿ ಹಾವಿನ ಮರಿಗಳನ್ನು ನೋಡಲು ಹೆಚ್ಚಿನ ಜನ ಸೇರಿದ್ದಾರೆ. ಅಲ್ಲದೆ ಈ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಉರಗ ತಜ್ಞರಿಗೆ ವಿಷಯ ತಿಳಿಸಿದ್ದಾರೆ.
ಇದನ್ನು ತಿಳಿದ ಅರಣ್ಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಳಿವಿನಂಚಿನಲ್ಲಿರುವ ಹೆಬ್ಬಾವು ಸಂತತಿಯನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ತಾಯಿ ಹಾವನ್ನು ಅದಷ್ಟು ಬೇಗ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/snake.gif)