ದೆಹಲಿ:
ಪಟೇಲ್ ಅವರ ಜನ್ಮದಿನವಾದ ಅಂಗವಾಗಿ ದೇಶಾದ್ಯಂತ ಏಕತೆಯ ಓಟ ನಡೆಯುತ್ತಿದ್ದರೆ, ಗುಜರಾತ್ ನ ನರ್ಮದಾ ನದಿ ತಟದ ಲ್ಲಿ ಪಟೇಲ್ಅವರ ಪ್ರತಿಮೆಯ ಲೋಕಾರ್ಪಣೆಯ ಸಂಭ್ರಮ. 182 ಮೀಟರ್ ಎತ್ತರದ ವಲ್ಲಭಭಾಯ್ ಪಟೇಲ್ ಅವರ ‘ಏಕತೆಯ ಪ್ರತಿಮೆ’ ಅನಾವರಣಗೊಂಡಿದೆ.
#WATCH: Sardar Vallabhbhai Patel's #StatueOfUnity inaugurated by Prime Minister Narendra Modi in Gujarat's Kevadiya pic.twitter.com/APnxyFACFT
— ANI (@ANI) October 31, 2018
ಇಂದು ಸರ್ದಾರ್ ಪಟೇಲ್ ರ ಪುತ್ತಳಿ ಅನಾವರಣ
ಸರ್ದಾರ್ ಜೀ ಅವರ 143ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಬುಧವಾರ ಕೆವಾಡಿಯಾ ಪಟ್ಟಣಕ್ಕೆ ಆಗಮಿಸಿದ ಪ್ರಧಾನಿ ಅವರು ವೇದಿಕೆ ಹಿಂಭಾಗದಲ್ಲಿನ ಎಲ್ಇಡಿ ಪರದೆಯ ಮೇಲೆ ಸರ್ದಾರ್ ಜೀ ಅವರ ಏಕತಾ ಪ್ರತಿಮೆಯ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತಿಮೆಯನ್ನು ಅನಾವರಣಗೊಳಿಸಿದರು.