ದೇವೇಗೌಡರ ಬಳಿ ಕಣ್ಣೀರಿಟ್ಟ ಭವಾನಿ ರೇವಣ್ಣ!!

ಹಾಸನ : 

      ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸೋಲು ಬೇಸರ ತರಿಸಿದೆ ಎಂದು ಸೊಸೆ ಭವಾನಿ ರೇವಣ್ಣ ದೇವೇಗೌಡರ ಬಳಿ ಕಣ್ಣೀರಿಟ್ಟಿದ್ದಾರೆ.

      ಇಂದು ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ಭೇಟಿ ನೀಡಿದ ಭವಾನಿ ರೇವಣ್ಣ, ಅನಿರೀಕ್ಷಿತ ಫಲಿತಾಂಶ ಬಂದಿದೆ. ನಿಮ್ಮ ಸೋಲನ್ನು ನಿರೀಕ್ಷಿಸಿರಲಿಲ್ಲ. ನಿಮ್ಮ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮಿಂದಾಗಿಯೇ ನಿಮಗೆ ಈ ಸೋಲಾಯಿತು. ನಮ್ಮನ್ನ ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದಾರೆ.

     ಕಣ್ಣಿರಿಡುತ್ತಲೇ ದೇವೇಗೌಡರಲ್ಲಿ ಮಾತನಾಡಿದ ಭವಾನಿ, ಹಾಸನದಲ್ಲೇ ನೀವು ಸ್ಪರ್ಧಿಸಬೇಕು. ಪ್ರಜ್ವಲ್ ರಾಜೀನಾಮೆ ಕೊಡ್ತಾರೆ. ಹಾಸನದಲ್ಲಿ ನೀವೆ ಸ್ಪರ್ಧಿಸಿ. ಯಾವ ಕಾರಣಕ್ಕು ಇಲ್ಲ ಎನ್ನಬೇಡಿ ಎಂದು ಮನವಿ ಮಾಡಿದ್ದಾರೆ.

     ಭವಾನಿ ಅವರ ಮನವಿಗೆ ಪ್ರತಿಕ್ರಿಯ ದೇವೇಗೌಡರು ಸೋಲುಗೆಲುವು ಸಹಜ. ಇದಕ್ಕೆಲ್ಲ ಎದೆಗುಂದಬಾರದು ಎಂದು ಸಮಾಧಾನ ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link