ಹೆಚ್ಡಿಕೆ ವಾಯ್ಸ್ ರೆಕಾರ್ಡ್ ಮಾಡುವಲ್ಲಿ Expert : ಬಿ.ಎಸ್.ವೈ

ಬೆಂಗಳೂರು:

      ಮುಖ್ಯಮಂತ್ರಿ ಕುಮಾರಸ್ವಾಮಿ ವಾಯ್ಸ್​ ರೆಕಾರ್ಡಿಂಗ್​ ಮಾಡುವಲ್ಲಿ ಎಕ್ಸ್​ಪರ್ಟ್ಸ್​ ಇದ್ದಾರೆ ಎಂದು ಬಿಜೆಪಿ ವಿರೋಧಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. 

      ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್‍ವೈ,  ಜೆಡಿಎಸ್​​ ಶಾಸಕ ನಾಗನಗೌಡಗೆ ಆಮಿಷವೊಡ್ಡಿರೋ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ರಿಲೀಸ್ ಮಾಡಿರೋ ಆಡಿಯೋ ಸತ್ಯಕ್ಕೆ ದೂರವಾದದ್ದು. ಕಥೆ ಕಟ್ಟಿ ಗೊಂದಲ ಉಂಟು ಮಾಡೋದು ಕುಮಾರಸ್ವಾಮಿ ಉದ್ದೇಶ. ಅವರು ಪ್ರೊಡ್ಯೂಸರ್, ಏನು ಬೇಕಾದ್ರೂ ಕ್ರಿಯೇಟ್ ಮಾಡ್ತಾರೆ. ವಾಯ್ಸ್​ ರೆಕಾರ್ಡಿಂಗ್​ ಮಾಡುವಲ್ಲಿ ಎಕ್ಸ್​ಪರ್ಟ್ಸ್​ ಇದ್ದಾರೆ. ಎಂದು ಹರಿಹಾಯ್ದಿದ್ದಾರೆ.

       ಸರ್ಕಾರದ ವೈಫಲ್ಯ ಮುಚ್ಚಿಹಾಕೋಕೆ, ತಮ್ಮ ಅಸಮಾಧಾನ ಮುಚ್ಚಿಹಾಕೋಕೆ ಮಾಡಿರೋ ನಾಟಕ. ಸಿಎಂ ಈ ಆರೋಪವನ್ನು ಸಾಬೀತುಪಡಿಸಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಲ್ಲದೆ 24 ಗಂಟೆಯಲ್ಲೇ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ” ಎಂದು ಸವಾಲ್ ಹಾಕಿದ್ದಾರೆ.  ಎಂದು ಬಿಎಸ್​​ವೈ ವಾಗ್ದಾಳಿ ನಡೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

      

 

Recent Articles

spot_img

Related Stories

Share via
Copy link
Powered by Social Snap