ವಿದ್ಯುತ್ ತಂತಿ ತುಳಿದು ತಂದೆ-ಮಗಳ ಸಾವು!!

ಮಂಗಳೂರು:

      ವಿದ್ಯುತ್ ತಂತಿಯನ್ನು ತುಳಿದು ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

      ಮೃತರನ್ನು ವಾಮದಪದವು ಸಮೀಪದ ಬಾರಕಿನಡಿ ನಿವಾಸಿ ಗೋಪಾಲಕೃಷ್ಣ (63), ಹಾಗೂ ಅವರ ಪುತ್ರಿ ದಿವ್ಯಾಶ್ರೀ (32) ಎಂದು ಗುರುತಿಸಲಾಗಿದೆ.

      ತಂದೆ ತನ್ನ ಮಗಳೊಂದಿಗೆ ಹುಲ್ಲು ತರಲೆಂದು ಮಂಗಳವಾರ ಸಂಜೆ ತೋಟಕ್ಕೆ ತೆರಳಿದ್ದು, ಈ ವೇಳೆ ತೋಟದಲ್ಲಿ ಮುರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದು ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

      ಹಳೆಯದಾದ ತಂತಿಗಳನ್ನು ಮೆಸ್ಕಾಂ ಇಲಾಖೆ ಬದಲಿಸದೇ ಇರುವುದು ಈ ಘಟನೆಗೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

      ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

Recent Articles

spot_img

Related Stories

Share via
Copy link
Powered by Social Snap