ಶಿರಸಿ:
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಹೆಮ್ಮಾಡಿಯ ಕುಂಬ್ರಿ ಮಜರೆಯಲ್ಲಿ ನಡೆದಿದೆ.
ನಯನಾ ನಾಗರಾಜ ಪೂಜಾರಿ (9) ತಂದೆಯಿಂದ ಮೃತಪಟ್ಟ ಬಾಲಕಿ. ತಂದೆ ನಾಗರಾಜ ಪೂಜಾರಿ ವಿಷ ನೀಡಿಯೋ ಅಥವಾ ಹಲ್ಲೆ ಮಾಡಿಯೋ ಕೊಲೆ ಮಾಡಿರಬಹದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದ್ದು, ಸಂಬಂಧಿಕರು ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.
ಇದಲ್ಲದೆ ಮೂರೂ ಹೆಣ್ಣು ಮಕ್ಕಳಾಗಿದೆ ಎಂದು ಹೆಂಡತಿಯೊಂದಿಗೂ ಆತ ಮನಸ್ತಾಪ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಮಕ್ಕಳು ತಾಯಿಯೊಂದಿಗೆ ಇರುವುದಾಗಿ ಹೇಳಿದ್ದರಿಂದ ಕೆರಳಿದ ತಂದೆ ರಾತ್ರಿ ಕುಡಿದ ಅಮಲಿನಲ್ಲಿ ಮಗಳಿಗೆ ವಿಷ ಕುಡಿಸಿ ಕೊಲೆಗೈದು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾಋಎ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
