ಕಾಂಗ್ರೆಸ್ ಗೆ ಗೌಡರ ವಾರ್ನಿಂಗ್..!?

ಬೆಂಗಳೂರು :

      ಮೈತ್ರಿ ಧರ್ಮ ಪಾಲನೆ ಪಾಲಿಸದಿದ್ದರೆ ಸರ್ಕಾರಕ್ಕೆ ಅಪಾಯ ಅಂತ ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ ದೇವೇಗೌಡರು ಖಡಕ್ ವಾರ್ನಿಂಗ್ ನೀಡಿದ್ದಾರೆ.

      2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಉತ್ತಮ ಫಲಿತಾಂಶ ದಾಖಲಿಸಬಹುದು. ತೆಲಂಗಾಣದಲ್ಲಿ ಟಿಆರ್ ಎಸ್ ಉತ್ತಮ ಜನಪರ ಆಡಳಿತ ನೀಡಿದ ಪರಿಣಾಮ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಅದೇ ರೀತಿ ಕುಮಾರಸ್ವಾಮಿ ಅವರು ರೈತರಿಗೆ ನೆರವು ನೀಡಲು ಸಾಲಮನ್ನಾ ಮಾಡಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲೂ ಮೈತ್ರಿ ಮಾಡಿಕೊಂಡರೆ ಉತ್ತಮ ಫಲಿತಾಂಶ ದಾಖಲಿಸಬಹುದು ಎಂದು ಹೇಳಿದರು.

      ಸರ್ಕಾರದ ಮೇಲೆ ಹಿಡಿತಕ್ಕೆ ಯತ್ನಿಸುವುದು ಒಳ್ಳೆಯದಲ್ಲ. ಯಾರಾದರೂ ಪ್ರಯತ್ನಿಸಿದರೆ ಅದು ದುರಂತಕ್ಕೆ ಕಾರಣವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೋಮುವಾದಿ ಶಕ್ತಿಗಳಿಗೆ ಪ್ರಯೋಜನ ಆಗಲು ಬಿಡಬೇಡಿ ಎಂದು ಹೇಳಿದ್ದಾರೆ.

      ಗೌಡರ ಈ ಮಾತುಗಳಿಂದಾಗಿ ಕಾಂಗ್ರೆಸ್‍ಗೆ ಈಗ ಒಂದು ಕಡೆ ಆಪರೇಷನ್ ಕಮಲ ಭೀತಿ, ಮತ್ತೊಂದು ಕಡೆ ಮೈತ್ರಿಧರ್ಮದ ಆತಂಕ ಎದುರಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link