ಬೆಂಗಳೂರು
ಆಂಬಿಡೆಂಟ್ ಕಂಪನಿಯಿಂದ ಗ್ರಾಹಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ತನಿಖೆಗೊಳ ಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿನ್ನೆ ಅಲಿಖಾನ್ನನ್ನು ಹಾಜಾರುಪಡಿಸಿದ ಸಿಸಿಬಿ ಅಧಿಕಾರಿಗಳು ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ ಸಿಸಿಬಿಯ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಅಲಿಖಾನ್ ವಿಚಾರಣೆ ನಡೆಯುತ್ತಿದ್ದು, 57 ಕೆಜಿ ಚಿನ್ನ ಎಲ್ಲಿದೆ ಅನ್ನೋದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.ಇನ್ನೊಂದೆಡೆ ಆಂಬಿಡೆಂಟ್ ಕಂಪನಿಗೆ ಸಂಬಂಧಪಟ್ಟ ಕೆಲ ಉದ್ಯಮಿಗಳ ವಿಚಾರಣೆಯನ್ನ ಸಿಸಿಬಿ ತಂಡ ಮುಂದುವರೆಸಿದೆ. ಈಗಾಗಲೇ ಕಂಪನಿಯಿಂದ ಹಲವಾರು ಮಂದಿಗೆ ಹಣ ಹೋಗಿರುವುದರಿಂದ ಆ ಹಣವನ್ನು ವಶಪಡಿಸಿಕೊಳ್ಳಲು ಸಿಸಿಬಿ ಹರಸಾಹಸ ಪಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
