ತುಮಕೂರು : ಡಿಸಿಎಂ ಪರಂ ಜೀರೋ ಟ್ರಾಫಿಕ್ ನಿಂದ ‘ಮೈತ್ರಿ’ಗೆ ಸೋಲು!!?

ತುಮಕೂರು :

     ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರ ಜೀಟೋ ಟ್ರಾಫಿಕ್ ನಿಂದಾಗಿ ತುಮಕೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

Related image

     ನಗರದಲ್ಲಿ ಮಾತನಾಡಿದ ಅವರು, ತುಮಕೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಆದರೆ, ಉಪಮುಖ್ಯಂತ್ರಿ ಜಿ.ಪರಮೇಶ್ವರ್ ರವರ ಜೀರೋ ಟ್ರಾಫಿಕ್ ನಿಂದ ಇಲ್ಲಿ ಪಕ್ಷ ಸೋಲಲು ಕಾರಣವಾಯಿತು. ಪರಮೇಶ್ವರ್ ರವರು ನನ್ನ ಸಹಕಾರದಿಮದಲೇ ಗೆಲುವು ಸಾಧಿಸಿದ್ದರು, ಆದರೆ ಅವರಿಗೆ ಉಪಕಾರ ಸ್ಮರಣೆ ಇಲ್ಲ. ಇನ್ನೊಂದು ವಾರದಲ್ಲಿ ಈ ಜೀರೋ ಟ್ರಾಫಿಕ್ ಕಡಿಮೆಯಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

     ಅಲ್ಲದೇ, ಮೋದಿ ಪ್ರಮಾಣವಚನದ ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಳಕ್ಕಿಳಿಯಲಿದೆ ಎಂದು ಭವಿಷ್ಯ ನುಡಿದಿರುವ ಅವರು, ಇನ್ನೊಂದು ವಾರದಲ್ಲಿ ಮೈತ್ರಿ ಸರ್ಕಾರ ಪತನವಾಗಿಲಿದೆ ಎಂದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap