ಶಾಸಕರ ರಾಜೀನಾಮೆ ವಿಚಾರ : ಮಾಧ್ಯಮಗಳ ವಿರುದ್ಧ ಸ್ಪೀಕರ್ ಗರಂ!!

ಬೆಂಗಳೂರು: 

      ಬಂಡಾಯ ಶಾಸಕರ ರಾಜೀನಾಮೆ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ.

      ಸ್ಪೀಕರ್ ರಮೇಶ್ ಕುಮಾರ್ ಅನಾರೋಗ್ಯದಿಂದ ಸಂಬಂಧಿಕರೊಬ್ಬರು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಸ್ಪೀಕರ್ ಗೆ ನೀವು ರಾಜೀನಾಮೆ ಅಂಗೀಕರಿಸುತ್ತೀರಾ ಎಂದು ಮಾಧ್ಯಮಗಳು ಪ್ರಶ್ನಿಸಿದ ವೇಳೆ ಕೋಪದಿಂದ ಪ್ರತಿಕ್ರಿಯೆ ನೀಡಿದ ಸ್ಪೀಕರ್, ನನ್ನ ಆಪ್ತರೊಬ್ಬರು ಇಲ್ಲಿ ನೋವಿನಲ್ಲಿದ್ದಾರೆ. ಅವರನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ನಿಮಗೆ ಬೈಟ್ ಕೊಡಬೇಕಾ…ಯೂ ಆರ್ ನಾಟ್ ಹ್ಯೂಮನ್ ಬೀಯಿಂಗ್? ನಿಮಗೆ ಮಾನವೀಯತೆ ಇಲ್ಲವೇ? ಗೆಟ್ ಔಟ್ ಫ್ರಂ ಹಿಯರ್. ಇಲ್ಲಿಂದ ನಡೀರಿ ಎಂದು ಗರಂ ಆಗಿದ್ದಾರೆ.

     ಇನ್ನು ಸ್ಪೀಕರ್​ ಅನುಪಸ್ಥಿತಿ ಬಗ್ಗೆ ಬಂಡಾಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ರಾಜೀನಾಮೆ ನೀಡಲು ಬರುತ್ತಿರುವ ವಿಷಯ ತಿಳಿದಿದ್ದು, ಸ್ಫೀಕರ್​ ಕಚೇರಿಯಲ್ಲಿ ಇಲ್ಲ. ನಾವೆಲ್ಲಾ ಸ್ಪೀಕರ್ ಕಾರ್ಯದರ್ಶಿ ವಿಶಾಲಾಕ್ಷಿಗೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link