ತಿಪಟೂರು : ಲಸಿಕೆಗಾಗಿ ಮಳೆಯಲ್ಲಿ ತೊಯ್ದ ನಾಗರೀಕರು

 ತಿಪಟೂರು : 

      ನಗರದ ಮಿನಿ ವಿದಾನಸೌಧದ ಹತ್ತಿರ ಇಂದು ಬೆಳಗ್ಗೆ ಮಳೆಯನ್ನು ಲೆಕ್ಕಿಸದೇ ಕೊರೊನಾ ಲಸಿಕೆಗಾಗಿ ಕಾಯ್ದು ಕುಳಿತಿದ್ದರು. ಲಸಿಕೆಗಾಗಿ ಬಂದವರು ನಾವು ಬೆಳಗಿನ ಜಾವವೇ ಬಂದಿದ್ದೇವೆ ಇಲ್ಲಿ ಲಸಿಕೆ ಇದೆ ಇಲ್ಲ ಎಂದು ತಿಳಿಸುವವರು ಯಾರು ಇಲ್ಲದೇ ಎಲ್ಲರೂ ಗೊಂದಲದಲ್ಲಿದ್ದೇವೆ. ಆರೋಗ್ಯ ಇಲಾಖೆಯಿಂದ ನಿಮಗೆ 2ನೇ ಡೋಸ್ ಲಸಿಕೆ ಬಂದಿದೆ ಇನ್ನೆರಡು ದಿನದಲ್ಲಿ ತೆಗೆದುಕೊಳ್ಳಿ ಎಂದು ಸಂದೇಶಬಂದಿದ್ದು ಅದರಂತೆ ನಾವು ಲಸಿಕೆ ತೆಗೆದುಕೊಳ್ಳಲು ಜನಸಂದಣೀ ಇರುತ್ತದೆ ಎಂದು ಬಂದೆವು ಆದರೆ ಇಲ್ಲಿಗೆ ಬಂದಾಗ ಲಸಿಕೆ ಇಲ್ಲವೆಂಬ ಫಲಕನೋಡಿ ಆತಂಕವಾಗಿ ಅಷ್ಟರಲ್ಲಿ ಮಳೆ ಬಂದಿದ್ದರಿಂದ ನಮಗೆ ಮಳೆಯಲ್ಲಿ ನೆನೆಯದೆ ಬೇರೆದಾರಿ ಇಲ್ಲದೇ ಇಲ್ಲಿಯೇ ಕುಳಿತೆವು.

     ತಾಲ್ಲೂಕು ಆಡಳಿತದಿಂದ ಲಸಿಕೆ ಕೊಡುತ್ತೇವೆಂದು ಸಾಮಾಜಕ ಜಾಲತಾಣದಲ್ಲಿ ಸಂದೇಶ ಕಳುಹಿಸುತ್ತಾರೆ, ಅದೇರೀತಿ ಇಂದು ಲಸಿಕೆ ಇಲ್ಲವೆಂದು ಒಂದು ಸಂದೇಶವನ್ನು ಹಾಕಿದ್ದರೆ ಇಲ್ಲಿಬಂದು ಮಳೆಯಲ್ಲಿ ತಿಂಡಿ ತೀರ್ಥ ಬಿಟ್ಟು ನೆನೆಯುವ ಅಗತ್ಯವಿರಲಿಲ್ಲ, ಹೆಚ್ಚಾಗಿ ಹಿರಿಯನಾಗರೀಕರೆ ಹೆಚ್ಚಾಗಿ ಇರುವುದರಿಂದ ಮಳೆಯಲ್ಲಿ ನೆನೆದರೆ ಇಲ್ಲದ ರೋಗಗಳು ಬರುತ್ತವೆ ಆದ್ದರಿಂದ ಲಸಿಕೆ ಇಲ್ಲವೆಂದು ಒಂದು ಸಂದೇಶವನ್ನು ಹಾಕುವಂತೆ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಬಾಲಕೃಷ್ಣ ತಾಲ್ಲೂಕು ಆಡಳಿತಕ್ಕೆ ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link