ತಿಪಟೂರು :
ಪೌರಾಯುಕ್ತ ಉಮಾಶಂಕರ್ ಅವರು ನಗರಸಭೆಯ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ಪಣ ತೊಟ್ಟಂತಿದ್ದು, ನಗರದಲ್ಲಿ ಈಗಾಗಲೇ ಸರ್ಕಾರಿ ಬಾವಿ, ಉದ್ಯಾನವನ, ನಿವೇಶನಗಳನ್ನು ಹುಡುಕಿ ತೆಗೆಯುತ್ತಿದ್ದು, ಬುಧವಾರ ನಗರದ 9ನೇ ವಾರ್ಡ್ನ ಲೇಔಟ್ ನಲ್ಲಿದ್ದ ಉದ್ಯಾನವನ್ನು ಸ್ವಚ್ಚಗೊಳಿಸಿ ನಗರಸಭೆಯ ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದ 9ನೇ ವಾರ್ಡಿನ ಸಿದ್ದಗಂಗಮ್ಮ ಬಡಾವಣೆಯಲ್ಲಿ 1997ರಲ್ಲಿ ನಗರಸಭೆಗೆ ಹಸ್ತಾಂತರವಾಗಿ ನಿರ್ವಹಣೆ ಕೊರತೆಯಿಂದ ಪಾಳುಬಿದಿದ್ದ, ಉದ್ಯಾನವನದ ಆಸ್ತಿಯನ್ನು ಸ್ವಚ್ಛಗೊಳಿಸಿ ನಗರಸಭೆಯ ಸುಪರ್ದಿಗೆ ಪಡೆದು ಸಂರಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್, 9ನೇ ವಾರ್ಡಿನ ಸದಸ್ಯ ಶಶಿಕಿರಣ್, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಬಡಾವಣೆಯ ನಿವಾಸಿಗಳು ಹಾಜರಿದ್ದರು.
ಅಕ್ರಮ ಕಟ್ಟಡಗಳ ಬಗ್ಗೆ ಗಮನಿಸುತ್ತಿಲ್ಲ :
ನಗರಸಭೆಯ ಆಸ್ತಿಗಳನ್ನು ಪತ್ತೆಹಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಿರುವ ಪೌರಾಯುಕ್ತರು ನಗರಸಭೆಯ ಪಕ್ಕದಲ್ಲೇ ನಿಗದಿತ ಎತ್ತರವನ್ನು ಮೀರಿ ಕಟ್ಟಡಗಳನ್ನು ಕಟ್ಟುತ್ತಿದ್ದರೂ ಏಕೆ ಪ್ರಶ್ನಿಸುತ್ತಿಲ್ಲವೆಂಬುದು ಸಾರ್ವಜನಿಕರ ಯಕ್ಷ ಪಶ್ನೆಯಾಗಿದೆ. ಈಗಲಾದರು ಪೌರಾಯುಕ್ತರು ಅನಧಿಕೃತವಾಗಿ ಹೆಚ್ಚು ಎತ್ತರ ಕಟ್ಟಿರುವ ಕಟ್ಟಡಗಳನ್ನು ಪತ್ತೆಹಚ್ಚಿ, ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೇನೊ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
