ತುಮಕೂರು : ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು

 ತುಮಕೂರು :

ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು 82 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ 18 ಸಾವಿರ ರೂ. ನಗದನ್ನು ಕಳುವು ಮಾಡಿರುವ ಘಟನೆ ನಗರದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಜರುಗಿದೆ.

      ಮನೆಯ ಮಾಲೀಕರಾದ ಜಯಮ್ಮ ಅವರು ಕೋವಿಡ್‍ನಿಂದಾಗಿ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು. ಸದರಿ ಮನೆಯಲ್ಲಿ ಬಾಡಿಗೆ ಇರುವವರು ಮನೆಯ ಬಾಗಿಲನ್ನು ಮುರಿದಿರುವುದನ್ನು ಗಮನಿಸಿ ಮನೆಯ ಮಾಲೀಕರಿಗೆ ಸುದ್ದಿ ಮುಟ್ಟಿಸಿದರು.

      ಸುದ್ದಿ ತಿಳಿದ ಕೂಡಲೆ ಮನೆಯ ಮಾಲೀಕರು ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತು. ಕಳ್ಳರು ಮನೆಯ ಹಿಂಬಾಗಿಲಿನ ಕಬ್ಬಿಣದ ಗ್ರಿಲ್ ಡೋರ್ ಮುರಿದು ಸರಳಿನಿಂದ ಮೀಟಿ ಒಳ ನುಗ್ಗಿ ಮನೆಯ ಲಾಕರ್‍ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap