ಉತ್ತರಾಖಂಡ : 15 ನಗರಗಳ ಹೆಸರು ಮರುನಾಮಕರಣ

ಡೆಹ್ರಾಡೂನ್:‌ 

    ಸಾರ್ವಜನಿಕ ಭಾವನೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ” ಅನುಗುಣವಾಗಿ ಹರಿದ್ವಾರ, ಡೆಹ್ರಾಡೂನ್, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ 15 ಸ್ಥಳಗಳನ್ನು ಮರುನಾಮಕರಣ ಮಾಡಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಮವಾರ ಘೋಷಿಸಿದರು. ಭಾರತೀಯ ಸಂಸ್ಕೃತಿಯ ಸಂರಕ್ಷಣೆ”ಗೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಮೂಲಕ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.

   ಹರಿದ್ವಾರ ಜಿಲ್ಲೆಯಲ್ಲಿ ಔರಂಗಜೇಬ್‌ಪುರವನ್ನು ಶಿವಾಜಿ ನಗರ, ಗಾಜಿವಾಲಿಯನ್ನು ಆರ್ಯ ನಗರ, ಚಂದ್‌ಪುರವನ್ನು ಜ್ಯೋತಿಬಾ ಫುಲೆ ನಗರ, ಮೊಹಮ್ಮದ್‌ಪುರ ಜಾಟ್‌ನಿಂದ ಮೋಹನ್‌ಪುರ ಜಾಟ್, ಖಾನ್‌ಪುರ ಕುರ್ಸಲಿಯಿಂದ ಅಂಬೇಡ್ಕರ್ ನಗರ, ಇಂದ್ರೀಶ್‌ಪುರದಿಂದ ನಂದಪುರ, ಖಾನ್‌ಪುರದಿಂದ ಶ್ರೀಕೃಷ್ಣಪುರ, ಮತ್ತು ಅಕ್ಬರ್‌ಪುರ ಫಜಲ್‌ಪುರವನ್ನು ವಿಜಯನಗರ ಎಂದು ಮರುನಾಮಕರಣ ಮಾಡಲಾಗುವುದು.

   ಹಾಗೂ ಡೆಹ್ರಾಡೂನ್ ಜಿಲ್ಲೆಯಲ್ಲಿ, ಮಿಯಾನ್‌ವಾಲಾವನ್ನು ರಾಮ್‌ಜಿ ವಾಲಾ ಎಂದು ಮರುನಾಮಕರಣ ಮಾಡಲಾಗುವುದು, ಪಿರ್ವಾಲಾವನ್ನು ಕೇಸರಿ ನಗರವಾಗಿ, ಚಂದ್‌ಪುರ ಖುರ್ದ್ ಅನ್ನು ಪೃಥ್ವಿರಾಜ್ ನಗರವಾಗಿ ಮತ್ತು ಅಬ್ದುಲ್ಲಾ ನಗರವನ್ನು ದಕ್ಷ್ ನಗರ ಎಂದು ಮರುನಾಮಕರಣ ಮಾಡಲಾಗುವುದು. ನೈನಿತಾಲ್ ಜಿಲ್ಲೆಯಲ್ಲಿ, ನವಾಬಿ ರಸ್ತೆಯನ್ನು ಅಟಲ್ ಮಾರ್ಗ ಎಂದು ಮರುನಾಮಕರಣ ಮಾಡಲಾಗುವುದು ಮತ್ತು ಪಂಚಕ್ಕಿಯಿಂದ ಐಟಿಐವರೆಗಿನ ರಸ್ತೆಯನ್ನು ಗುರು ಗೋಲ್ವಾಲ್ಕರ್ ಮಾರ್ಗ ಎಂದು ಹೆಸರಿಸಲಾಗುವುದು. ಉಧಮ್ ಸಿಂಗ್ ನಗರದಲ್ಲಿ, ಸುಲ್ತಾನ್‌ಪುರ ಪಟ್ಟಿ ಮುನ್ಸಿಪಲ್ ಕೌನ್ಸಿಲ್ ಅನ್ನು ಕೌಶಲ್ಯ ಪುರಿ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಧಾಮಿ ತಿಳಿಸಿದ್ದಾರೆ. 

   ಮುಖ್ಯಮಂತ್ರಿ ಧಾಮಿ ಅವರ ಈ ನಿರ್ಧಾರವನ್ನು ಬಿಜೆಪಿ ಶ್ಲಾಘಿಸಿದೆ. ಭಾರತೀಯ ಜನತಾ ಪಕ್ಷವು ಈ ನಿರ್ಧಾರವನ್ನು ಸ್ವಾಗತಿಸುತ್ತದೆ. ಒಂದೆಡೆ, ಈ ನಿರ್ಧಾರವು ಭಾರತೀಯ ಸಂಸ್ಕೃತಿಯ ಸಂರಕ್ಷಣೆಗೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಮೂಲಕ ಜನರಿಗೆ ಸ್ಫೂರ್ತಿ ನೀಡುತ್ತದೆ, ಮತ್ತೊಂದೆಡೆ, ವಿದೇಶಿ ಆಕ್ರಮಣಕಾರರು ಮಾಡಿದ ದೌರ್ಜನ್ಯಗಳ ಬಗ್ಗೆ ಅವರಿಗೆ ಅರಿವು ಮೂಡಿಸುತ್ತದೆ ಎಂದು ರಾಜ್ಯದಲ್ಲಿ ಬಿಜೆಪಿಯ ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾಣ್ ಹೇಳಿದ್ದಾರೆ.