ರಾಜಸ್ಥಾನ : ಯಾರಾಗತ್ತಾರೆ ವಿರೋಧ ಪಕ್ಷದ ನಾಯಕ ?

ಜೈಪುರ:

      ಅಸ್ಸಾಂ ರಾಜ್ಯಪಾಲರಾಗಿ ಭಾನುವಾರ ನೇಮಕಗೊಂಡ ಗುಲಾಬ್ ಚಂದ್ ಕಟಾರಿಯಾ ಅವರು  ಎಂಟು ಬಾರಿ ಶಾಸಕರಾಗಿ ಮತ್ತು ಒಂದು ಬಾರಿ ಸಂಸದರಾಗಿರುವ ಆಯ್ಕೆಯಾಗಿದ್ದರು. ಅವರು ಈ ಹಿಂದೆ ರಾಜಸ್ಥಾನ ಬಿಜೆಪಿ ಅಧ್ಯಕ್ಷರೂ ಸಹ ಆಗಿದ್ದರು.

    ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ಅವರು ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದ್ದರು, ಆದರೆ ಇದರ ಕುರಿತಾಗಿ  ಯಾವುದೇ ರೀತಿಯ ಚರ್ಚೆಯಾಗಿಲ್ಲ ಎಂದರು. ದಕ್ಷಿಣ ರಾಜಸ್ಥಾನದ ನಾಯಕರಾದ ಕಟಾರಿಯಾ ಅವರು ಅಂತಹ ನಿರೀಕ್ಷೆಯನ್ನು ಹೊಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

      ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪ್ರತಿಪಕ್ಷದ ಉಪ ನಾಯಕ ರಾಜೇಂದ್ರ ರಾಥೋಡ್ ಮತ್ತು ಇತರ ನಾಯಕರು ಕಟಾರಿಯಾ ಅವರನ್ನು ರಾಜ್ಯಪಾಲರನ್ನಾಗಿ ಮಾಡಿದ್ದಕ್ಕಾಗಿ ಅಭಿನಂದಿಸಿದ್ದಾರೆ.

    ಚುನಾವಣಾ ವರ್ಷದಲ್ಲಿ ಯುವ ನಾಯಕರಿಗೆ  ಅಧಿಕಾರ ನೀಡದ ಈ ಕ್ರಮವು  ಉತ್ತಮವಾಗಿ  ಎಂದು ರಾಜಸ್ಥಾನದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ . ಆದರೆ, ಈಗ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಯಾರಾಗುತ್ತಾರೆ ಎಂಬ ಪ್ರಶ್ನೆ ಉದ್ಬವಿಸಿದೆ . ಸದ್ಯ ವಿಧಾನಸಭೆ ಕಲಾಪ ನಡೆಯುತ್ತಿರುವುದರಿಂದ ಬಜೆಟ್‌ ಮೇಲಿನ ಚರ್ಚೆ ಮತ್ತು ಪ್ರಶ್ನೋತ್ತರಗಳಿಗೆ  ಯಾರು ಹೊಣೆ ಹೊರುತ್ತಾರೆ ಎಂದು ಕಾದು ನೋಡಬೇಕಿದೆ. ಹೀಗಿರುವಾಗ ಇಂದು ಅಥವಾ ನಾಳೆ ವಿರೋಧ ಪಕ್ಷದ ನಾಯಕರ ಹೆಸರು ಘೋಷಣೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link