‘ಯಲಹಂಕ ವಾಯ್ಸ್’ ಪತ್ರಿಕೆ ಸಂಪಾದಕ ನೇಣಿಗೆ ಶರಣು!!

ಬೆಂಗಳೂರು:

      ಬೆಂಗಳೂರಿನ ‘ಯಲಹಂಕ ವಾಯ್ಸ್’ ಕನ್ನಡ ಮಾಸ ಪತ್ರಿಕೆ ಸಂಪಾದಕ ಅನಿಲ್ ರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

      ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಯಲಹಂಕ ಉಪನಗರ ಪೊಲೀಸರು ಅನಿಲ್ ಅವರನ್ನು ಬಂಧಿಸಿದ್ದರು. ಹಲವು ದಿನಗಳಿಂದ ಜೈಲಿನಲ್ಲಿ ಇದ್ದ ಅವರಿಗೆ ಜಾಮೀನು ಸಿಕ್ಕಿರಲಿಲ್ಲ.

      ನಿನ್ನೆ ರಾತ್ರಿ 7.30 ರ ವೇಳೆ ಜೈಲಿನ ಸಿಬ್ಬಂದಿಯ ಕಣ್ತಪ್ಪಿಸಿ 4 ನೇ ಬ್ಯಾರಕ್ ಪ್ರವೇಶಿಸಿ ಅಲ್ಲಿನ ಶಿವ ದೇವಾಲಯದ ಕಂಬಿಗೆ ಬೆಡ್‌ಶಿಟ್‌ನಲ್ಲಿ ನೇಣು ಬಿಗಿದುಕೊಂಡು ಅಸ್ವಸ್ಥನಾಗಿದ್ದಾರೆ. ಅನಿಲ್‌ರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಮಾರ್ಗ ಮಧ್ಯಯೇ ಅವರು ಮೃತಪಟ್ಟಿದ್ದರು ಎಂಬ ಮಾಹಿತಿ ಸಿಕ್ಕಿದೆ.

      ಮಂಗಳವಾರ ಕುಟುಂಬ ಸದಸ್ಯರು ಅವರನ್ನು ಭೇಟಿಯಾಗಿದ್ದರು.ಆದರೆ, ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ? ಎಂಬುದ ಇನ್ನೂ ನಿಗೂಢವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap