ಕಾಲಿಲ್ಲದ ಅಂಗವಿಕಲನಿಗೆ ಆದಷ್ಟು ಬೇಗ ತ್ರಿಚಕ್ರ ವಾಹನ ಮಂಜೂರಾಗಲಿ

ಮಧುಗಿರಿ

       ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಆರ್.ಗೊಲ್ಲರಹಟ್ಟಿಯ ಗೋಪಾಲಕೃಷ್ಣ ಎನ್ನುವ ವ್ಯಕ್ತಿ ಬಲಗಾಲು ಇಲ್ಲದ ಅಂಗವಿಕಲನಾಗಿರುತ್ತಾರೆ. ಈತನ ಜೀವನ ನಿರ್ವಹಣೆ ಕಷ್ಟಕರವಾಗಿರುತ್ತದೆ. ಈತನಿಗೆ ಸರ್ಕಾರದಿಂದ ಉಚಿತವಾಗಿ ನೀಡುವ ತ್ರಿಚಕ್ರ ಮೋಟಾರ್ ವಾಹನದ ಅವಶ್ಯತೆ ಇರುತ್ತದೆ.

      ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 01-06-2017 ರಿಂದ ಸತತವಾಗಿ ಅರ್ಜಿಗಳನ್ನು ಸಲ್ಲಿಸಿ, ಮನವಿಯನ್ನು ಮಾಡಿಕೊಂಡಿರುತ್ತಾರೆ. ಆದರೂ ಸಹ ಇಲ್ಲಿಯವರೆಗೂ ಸದರಿ ಅಂಗವಿಕಲನಿಗೆ ವಾಹನ ನೀಡಿರುವುದಿಲ್ಲ. ಈ ಹಿಂದೆ ಇದ್ದಂತಹ ಮಧುಗಿರಿ ವಿಧಾನ ಸಭಾ ಸದಸ್ಯರಿಗೂ ಮನವಿಯನ್ನು ನೀಡಿದ್ದೆ ಎಂದು ಪತ್ರಿಕೆಗೆ ತಿಳಿಸಿರುತ್ತಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮಾನವೀಯತೆ ಮತ್ತು ಕಾನೂನಿನ ಅಡಿಯಲ್ಲಿ ಸದರಿ ಅಂಗವಿಕಲನಿಗೆ ತ್ರಿಚಕ್ರ ಮೋಟಾರ್‍ವಾಹನ ಕೊಟ್ಟರೆ ಬಹಳಷ್ಟು ಅನುಕೂಲವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap