ರೆಡ್ಡಿ ಶರಣಾಗತಿ..! : ರಾಮುಲು ನೀಡಿದ ಸ್ಪೋಟಕ ಮಾಹಿತಿ ..!?

ಬೆಂಗಳೂರು:

      ಬಹುಕೋಟಿ ಮೊತ್ತದ ಡೀಲ್‌ ಪ್ರಕರಣದ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಅವರು ಎಲ್ಲಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ನಡುವೆ ರೆಡ್ಡಿ ಪರ ವಕೀಲರು ನಿರೀಕ್ಷಣಾ ಜಾಮೀನಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

      ಸಿಸಿಬಿ ಪೊಲೀಸರ ತಂಡಗಳು ರೆಡ್ಡಿ ಅವರ ಪತ್ತೆಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು , ಕೋರ್ಟ್‌ ಜಾಮೀನು ನೀಡಲಿದೆಯೇ ಎನ್ನುವುದನ್ನು ಪೊಲೀಸ್‌ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ. 

      ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದೇವನಹಳ್ಳಿ ಸೇರಿದಂತೆ ವಿವಿಧೆಡೆ ರೆಡ್ಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ಜನಾರ್ದನ ರೆಡ್ಡಿ ಪೋಲಿಸರಿಗೆ ಶರಣು ಮಾಡಿಸುವುದಕ್ಕೆ ಶ್ರೀರಾಮುಲು ಎಂಟ್ರಿ ನೀಡಿದ್ದಾರೆ.

      ಬೇಕಾಗಿರುವುದು ಗಾಲಿ ಜನಾರ್ದನ ರೆಡ್ಡಿ ಮಾತ್ರ ಹೀಗಾಗಿ ಬೇರೆಯವರಿಗೆ ಹಿಂಸೆ ನೀಡುವ ಬದಲು ಗಾಲಿ ಜನಾರ್ದನ ರೆಡ್ಡಿಯೇ ಖುದ್ದು ಸಿಸಿಬಿ ಪೋಲಿಸರಿಗೆ ಶರಣಾಗಿ ಮುಂದೆ ತನಿಖೆಗೆ ಸಹಕಾರ ನೀಡಲಿದ್ದಾರೆ. ಒಂದು ವೇಳೆ ನೀವು ಒಪ್ಪಿದರೆ ಗಾಲಿ ಜನಾರ್ದನ ರೆಡ್ಡಿಯವರು ನಿಮ್ಮ ಮುಂದೆ ಶರಣು ಮಾಡಲಾಗುವುದು ಅಂತ ಶ್ರೀ ರಾಮುಲು ಸಿಸಿಬಿ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳೂ ಕೂಡ ಒಪ್ಪಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಶ್ರೀರಾಮುಲು ಕಡೆಯಿಂದ ಗಾಲಿ ಜನಾರ್ದನ ರೆಡ್ಡಿ ಪೋಲಿಸರ ಮುಂದೆ ಶರಣಾಗಲಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

 


Recent Articles

spot_img

Related Stories

Share via
Copy link
Powered by Social Snap