ಚಳ್ಳಕೆರೆ:
21 ನಗರದ ರಾಷ್ಟ್ರೀಯ ಹೆದ್ದಾರಿ ಬುಡ್ನಹಟ್ಟಿ ಬಳಿ ಗುರುವಾರ ಮಧ್ಯಾಹ್ನ ಬುಡ್ನಹಟ್ಟಿಯಿಂದ ಚಳ್ಳಕೆರೆ ಕಡೆಗೆ ಸ್ಕೂಟರ್ನಲ್ಲಿ ಬರುತ್ತಿದ್ದ ಬಿ.ಡಿ.ಆನಂದ(50) ಎಂಬ ಕೂಲಿಕಾರ್ಮಿಕ ಹಾಗೂ ಕಾಯಿ ವ್ಯಾಪಾರಿಗೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿಹೊಡೆದ ಪರಿಣಾಮವಾಗಿ ಆನಂದ ಸ್ಥಳದಲ್ಲೇ ಸಾವನಪ್ಪಿರುತ್ತಾನೆ.
ಇಲ್ಲಿನ ಎಐಟಿಯುಸಿ ಸಂಘಟನೆ ಕಾರ್ಮಿಕನಾದ ಈತ ಜೀವನ ನಿರ್ವಹಣೆಯಾಗಿ ಕಾಯಿ ವ್ಯಾಪಾರವನ್ನು ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಕುದಾಪುರ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಪುತ್ರಿ ಡಾ.ಶ್ವೇತಳನ್ನು ಸ್ಕೂಟರ್ನಲ್ಲಿ ಗ್ರಾಮದ ತನ್ನ ಮನೆಗೆ ಬಿಟ್ಟು ಚಳ್ಳಕೆರೆ ಕಡೆ ಬರುವಾಗ ಈ ಅಪಘಾತ ಸಂಭವಿಸಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತಾಪ :- ಬಿ.ಡಿ.ಆನಂದರವರ ನಿಧನಕ್ಕೆ ಎಐಟಿಯುಸಿ ಸಂಘಟನೆಯ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ತಾಲ್ಲೂಕು ಅಧ್ಯಕ್ಷ ತಿಪ್ಪೇರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ ಸಂತಾಪವ್ಯಕ್ತ ಪಡಿಸಿ, ಸಂಘಟನೆ ವತಿಯಿಂದ 10 ಸಾವಿರ ನೀಡಿರುತ್ತಾರೆ.
