ವಚನಕಾರರ ಚಿಂತನೆಗಳು ಆದರ್ಶವಾಗಬೇಕು

ಚಿಕ್ಕನಾಯಕನಹಳ್ಳಿ:

  ತಾಲ್ಲೂಕು ಶಸಾಪ ನೂತನ ಕಾರ್ಯಕಾರಿ ಸಮಿತಿಗೆ ಚಾಲನೆ

ವ್ಯಕ್ತಿ ಮನುಷ್ಯನಾಗಿ ಬೆಳೆಯಲು ವಚನಗಳು ದಾರಿದೀಪವಿದ್ದಂತೆ. ಬಸವಣ್ಣ, ಅಲ್ಲಮಪ್ರಭು ಮುಂತಾದವರ ಚಿಂತನೆಗಳು ನಮಗೆ ಅದರ್ಶವಾಗಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ “ಪದಗ್ರಹಣ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಗೋಡೆಕೆರೆಯ ಚರ ಪಟ್ಟಾಧ್ಯಕ್ಷರಾದ ಮೃತ್ಯುಂಜಯ ಶ್ರೀಗಳು ಮಾತನಾಡಿ, ಸಿದ್ಧರಾಮ, ಬಸವಣ್ಣ, ಅಕ್ಕಮಹಾದೇವಿಯವರ ಚಿಂತನೆಗಳು ನಮ್ಮ ಬದುಕಿಗೆ ಶಕ್ತಿ ಎಂದರಲ್ಲದೆ, ವಿದ್ಯೆಗೆ ಹೆಚ್ಚಿನ ಶಕ್ತಿ ಇದ್ದು, ಅದರತ್ತ ವಿದ್ಯಾರ್ಥಿಗಳು ಹೆಜ್ಜೆ ಇಡಬೇಕು. ಒಳ್ಳೆಯ ವಾತಾವರಣದಲ್ಲಿ ಇರುವ ನವೋದಯ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಂ.ವಿ.ನಾಗರಾಜರಾವ್ ಹಾಗೂ ಡಾ.ಪ್ರಶಾಂತ್‍ಶೆಟ್ಟಿ ಯವರಿಗೆ ಶರಣ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಎಂ.ಜಿ.ಸಿದ್ದರಾಮಯ್ಯ, ಹಂ.ಸಿ.ನಾಗರಾಜ್, ಪೆÇ್ರ.ಹೆಚ್.ಎಸ್.ಶಿವಯೋಗಿ, ಜಯದೇವ, ಸಿ.ಎಲ್.ಮಲ್ಲಿಕಾರ್ಜುನಯ್ಯ, ಪೆÇ್ರ.ಬಸವರಾಜಹೊನ್ನೆಬಾಗಿ, ಸಿ.ರವಿಕುಮಾರ್ ಭಾಗವಹಿಸಿದ್ದರು. ಜಿಲ್ಲೆಯ ಬೇರೆ ಬೇರೆ ಭಾಗದಿಂದ ಶರಣ ಬಂಧುಗಳು ಆಗಮಿಸಿದ್ದರು. ನವೋದಯ ಕಾಲೇಜಿನ ವಿದ್ಯಾರ್ಥಿಗಳು ವಚನ ಮತ್ತು ಜಾನಪದ ಕಾರ್ಯಕ್ರಮ ನಡೆಸಿಕೊಟ್ಟರು.

ಚಿಕ್ಕನಾಯಕನಹಳ್ಳಿ ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ “ಪದಗ್ರಹಣ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿ ಎಂ.ವಿ.ನಾಗರಾಜ್‍ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸುತ್ತೂರು ಶ್ರೀಗಳ ಕನಸು ಹೊತ್ತು, ರೂಪುಗೊಂಡ ಶರಣ ಸಾಹಿತ್ಯ ಪರಿಷತ್ ಇಂದು ರಾಜ್ಯದ ನಾನಾ ಮೂಲೆಗಳಲ್ಲಿ ತನ್ನ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಇಲ್ಲಿ ಆಯೋಜಿಸಲು ನಮ್ಮ ಸಹಕಾರವಿದೆ.

-ಜೆ.ಸಿ.ಮಾಧುಸ್ವಾಮಿ, ಸಚಿವರು.

ಕಾಯಕ ನಂಬಿದರೆ ಶ್ರೇಯಸ್ಸು :

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ, ಬದುಕಿನ ಬೆಳವಣಿಗೆಯಲ್ಲಿ ವಚನಗಳ ಪಾತ್ರ ಮುಖ್ಯ, ಯಾರು ಜೀವನದಲ್ಲಿ ಕಾಯಕ ನಂಬಿ ಬದುಕುತ್ತಾರೋ ಅವರು ಸರ್ವ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಓದಿನ ಜೊತೆ ಜೊತೆಗೆ ವಚನಗಳ ಮೌಲ್ಯ ಉಳಿಸಿಕೊಳ್ಳುವತ್ತ ಹೆಜ್ಜೆ ಹಾಕಬೇಕು ಹಾಗೂ ಪ್ರತಿ ಮನೆ ಮನೆಗೂ ಶರಣ ಸಾಹಿತ್ಯ ಪರಿಷತ್ತಿನ ಚಟುವಟಿಕೆ ಮುಂದುವರೆಯಲು ಎಲ್ಲರೂ ಜೊತೆಯಾಗಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link