ಹೊಸದುರ್ಗ:
ತಾಲ್ಲೂಕಿನ ಕಾನಬೇವಿನಹಳ್ಳಿ ಗ್ರಾಮದ ಹನುಮಂತಪ್ಪ(70) ಎಂಬುವವರಿಗೆ ಕರಡಿ ದಾಳಿ ಮಾಡಿದೆ.ಹನುಮಂತಪ್ಪನವರು ಸೋಮವಾರ ಬೆಳಿಗಿನ ಜಾವ ತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ಕರಡಿ ಮೈ ಮೇಲೆ ಎಗರಿ ಬಲಗಾಲು ಮತ್ತು ಎಡಗಾಲುಗಳಿಗೆ ಪರಚಿ ಗಾಯಗಳನ್ನು ಮಾಡಿರುತ್ತದೆ. ವಿಷಯ ತಿಳಿದ ಅಲ್ಲೆ ಇದ್ದ ಸಾರ್ವಜನಿಕರು ತಕ್ಷಣ ಸ್ಥಳಕ್ಕೆ ಧಾವಿಸಿ ಕರಡಿಯನ್ನು ಓಡಿಸಿದ್ದಾರೆ. ನಂತರ ಹನುಮಂತಪ್ಪನವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದಾಳಿ ಸಮಯದಲ್ಲಿ ಗಾಯಗಳು ಬಿಟ್ಟರೆ ಪ್ರಾಣಾಪಾಯವಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
