ಅಲೆಮಾರಿಗಳ ಪುನರ್ ವಸತಿಗೆ ಆಗ್ರಹ

ಚಿತ್ರದುರ್ಗ:

      ಹೊಳಲ್ಕೆರೆ ತಾಲ್ಲೂಕು, ರಾಮಗಿರಿಯಲ್ಲಿ ಸುಡುಗಾಡು ಸಿದ್ಧರು, ಕೊರಚ, ಕೊರಮ, ದಲಿತರು ಮತ್ತು ಅಲೆಮಾರಿಗಳು ಹಲವು ವರ್ಷಗಳಿಂದ ವಾಸವಾಗಿದ್ದು, ಮಳೆ ನೀರಿನಿಂದಾಗಿ ನಿರಾಶ್ರಿತರ ಕೇಂದ್ರ ಸೇರಿಕೊಂಡಿದ್ದಾರೆ. ಈ ಸಮುದಾಯಗಳಿಗೆ ಪುನರ್ ವಸತಿಯನ್ನು ತುರ್ತಾಗಿ ಕಲ್ಪಿಸಬೇಕೆಂದು ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ, ವಿಮುಕ್ತಿ ವಿದ್ಯಾಸಂಸ್ಥೆ ಮತ್ತು ಅಲೆಮಾರಿ, ಅರೆಅಲೆಮಾರಿ, ಬುಡಕಟ್ಟು, ಎಸ್.ಸಿ.ಎಸ್.ಟಿ. ಮಹಾಸಭಾ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

      ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಬಾರಿ ಮಹಿಳೆಯಿಂದಾಗಿ ರಾಮಗಿರಿಯ ಸುಡುಗಾಡು ಸಿದ್ಧರು ಮತ್ತು ಅಲೆ ಮಾರಿ ಕಾಲೋನಿಗೆ ಏಕಾಏಕಿ ನೀರು ನುಗ್ಗಿ ಅಲೆಮಾರಿ ಸಮುದಾಯದವರು ಬೆಳಗಾಗುವುದರೊಳಗಾಗಿ ಟೆಂಟ್‍ಗಳು ಮತ್ತು ಗುಡಿಸಲುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು, ರಾಮಗಿರಿಯ ನಿರಾಶ್ರಿತ ಕೇಂದ್ರದಲ್ಲಿಆಶ್ರಯ ಪಡೆದುಕೊಂಡಿದ್ದಾರೆ.

      ಅಲೆಮಾರಿ ಕಾಲೋನಿಗೆ ಭೇಟಿ ನೀಡಿ ಪರಿಶಿಲನೆ ನಡೆಸಿದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸತ್ಯಭಾಮಅವರಿಗೆಅಲೆಮಾರಿ ಸಂಘಟನೆ ವತಿಯಿಂದ ಮನವಿ ಮಾಡಿಕೊಳ್ಳಲಾಗಿದ್ದು, ಪುನರ್ ವಸತಿ ಸೌಲಭ್ಯಕಲ್ಪಿಸುವಂತೆಕೋರಲಾಗಿದೆ. ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಳೆ ನೀರಿನಿಂದಟೆಂಟ್ ಮತ್ತು ಗುಡಿಸಲುಗಳನ್ನು ಕಳೆದುಕೊಂಡು ಬೀದಿ ಪಾಲಾಗಿರುವ ನೂರಾರುಜನರನ್ನು ಪ್ರತ್ಯಕ್ಷವಾಗಿ ನೋಡಿದ ಜಿ.ಪಂ.ಸಿ.ಇ.ಓ. ಸ್ಥಳದಲ್ಲೇ ಹಾಜರಿದ್ದಗ್ರಾಮಪಂಚಾಯಿತಿ ಪಿ.ಡಿ.ಓ., ಗ್ರಾಮಲೆಕ್ಕಾಧಿಕಾರಿ ಗಳವರಿಗೆ ಸೂಚನೆ ನೀಡಿ, ತುರ್ತಾಗಿ ಪುನರ್ ವಸತಿ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

      ಸ್ಥಳದಲ್ಲೇ ಹಾಜರಿದ್ದಅಲೆಮಾರಿ ಸಂಘಟನೆಯ ಮುಖಂಡರು ಸಿ.ಇ.ಓ. ಅವರಿಗೆ ಮನವಿ ಮಾಡಿಕೊಂಡಿದ್ದು, ಈಗಾಗಲೇ ಕಳೆದ ನಾಲ್ಕೈದು ವರ್ಷಗಳಿಂದ ಹಕ್ಕು ಪತ್ರ ನೀಡಲಾಗಿದ್ದರೂ ಮನೆ ನಿರ್ಮಿಸಿಕೊಡುವಲ್ಲಿ ಅನಗತ್ಯ ವಿಳಂಭವಾಗುತ್ತಿದೆ.ಈ ಕಾರ್ಯವನ್ನುತುರ್ತಾಗಿ ಪೂರೈಸಿಕೊಡುವಂತೆ ಕೋರಲಾಯಿತು.ಅಲೆಮಾರಿಗಳ ಅಹವಾಲುಗಳನ್ನು ಕೇಳಿಸಿಕೊಂಡ ಸಿ.ಇ.ಓ. ಅವರುಡಾ|| ಬಿ.ಆರ್.ಅಂಬೇಡ್ಕರ್‍ಅಭಿವೃದ್ಧಿ ನಿಗಮದಜಿಲ್ಲಾ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ, ಮುಂದಿನ ಕಾರ್ಯಯೋಜನೆಯನ್ನುರೂಪಿಸಲು ಸಲಹೆ ನೀಡಲಾಗುತ್ತದೆಎಂದರು.

      ನಂತರ ಅಲೆಮಾರಿ ಕಾಲೋನಿಗೆ ಭೇಟಿ ನೀಡಿದಜಿಲ್ಲಾಧಿಕಾರಿ ವಿನೂತ್ ಪ್ರಿಯಾಅವರುಅಲೆಮಾರಿಕಾಲೋನಿಯ ಸಂಪೂರ್ಣ ಸಮಸ್ಯೆಯನ್ನುಖುದ್ದಾಗಿ ಪರಿಶೀಲಿಸಿ ಪರಿಹಾರಕಾರ್ಯ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಮಗಿರಿಅಲೆಮಾರಿ ಕಾಲೋನಿಗೆ ಅಲೆಮಾರಿಅರೆಅಲೆಮಾರಿ ಸಂಘಟನೆಯ ಮತ್ತು ಸುಡುಗಾಡುಸಿದ್ಧರ ಜನಾಂಗದಜಿಲ್ಲಾಧ್ಯಕ್ಷರಾದ ಹಿರಿಯೂರುಕೃಷ್ಣಪ್ಪ, ಜಗಳೂರು ಜಯಣ್ಣ ಮತ್ತುಕರ್ನಾಟಕ ಶಾಂತಿ ಸೌಹಾರ್ದ ವೇದಿಕೆಯಅಧ್ಯಕ್ಷರಾದ ನರೇನಹಳ್ಳಿ ಅರುಣ್‍ಕುಮಾರ್, ವಿಮುಕ್ತಿ ವಿದ್ಯಾಸಂಸ್ಥೆಯ ಸಂಯೋಜಕರಾದಟಿ.ಕುಮಾರ್, ಅಲೆಮಾರಿ ಸಂಘಟನೆಯರೆಡ್ಡಿಗಂಗಣ್ಣ ಮುಂತಾದಅಲೆಮಾರಿ ಕಾಲೋನಿ ಜನರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link