ಮನೆ, ನಿವೇಶನ ಹಂಚಿಕೆಗೆ ತುರ್ತು ಕ್ರಮ ಕೈಗೊಳ್ಳಿ:ಶಾಸಕ

ಚಿತ್ರದುರ್ಗ

     ಸರ್ಕಾರಿ ಜಮೀನಿನಲ್ಲಿ ತುರ್ತಾಗಿ ನಿವೇಶನಗಳನ್ನು ವಿಂಗಡಿಸಿ ಅರ್ಹ ಪಲಾನುಭವಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕರು, ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರದೆ ಬಡವರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದರು ಸರ್ಕಾರದ ಜಾಗದಲ್ಲಿ ಶೀಘ್ರವಾಗಿ ನಿವೇಶನಗಳನ್ನು ನಿರ್ಮಾಣ ಮಾಡಿ, ಹಾಗೇಯೇ ಮನೆಗಳನ್ನು ಪೂರ್ಣ ಕಾರ್ಯವನ್ನು ಮುಗಿಸಿ ಜನರಿಗೆ ಮನೆ ಮತ್ತು ನಿವೇಶನಗಳನ್ನು ವಿತರಣೆ ಮಾಡಲು ಮುಂದಾಗುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಗ್ರಾಮಗಳಲ್ಲಿ ಯಾವುದೇ ಬಗೆಯ ತಕರಾರು ಇಲ್ಲದಂತೆ ನಿವೇಶನ ಮತ್ತು ಮನೆ ನಿರ್ಮಾಣ ಹಂಚಿಕೆಗೆ ಅಧಿಕಾರಿಗಳು ಶ್ರಮವಹಿಸಬೇಕು. ತಕರಾರು ಇದ್ದರೆ ಗ್ರಾಮಸ್ಥರ ಮನವೊಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪಲಾನುಭಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ತಿಪ್ಪಾರೆಡ್ಡಿ ಹೇಳಿದರು

     ಚಿತ್ರದುರ್ಗ ನಗರ ಬೆಳೆಯುತ್ತಿದೆ ಹೊಸದಾದ ಬಡಾವಣೆಗಳು ನಿರ್ಮಾಣವಾಗುತ್ತಿದೆ ಈ ಹಿನ್ನಲೆಯಲ್ಲಿ ವಿದ್ಯಾನಗರ, ತರಳಬಾಳು ನಗರ. ಬಸವೇಶ್ವರ ನಗರ ಬ್ಯಾಂಕ್ ಕಾಲೋನಿಗೆ ನೀರನ್ನು ಸರಬರಾಜು ಮಾಡುವ ಸಲುವಾಗಿ ಸುಮಾರು 10 ಲಕ್ಷ ಲೀ ಸಾಮಥ್ರ್ಯದ ಓವರ್ ಟ್ಯಾಂಕ್ ನಿರ್ಮಾಣ ಮಾಡುವಂತೆ ಸೂಚಿಸಿ ವಿದ್ಯಾನಗರದಲ್ಲಿ ನಿರ್ಮಾಣ ಮಾಡಿದರೆ ಬೇರೆ ಕಡೆಗೆ ಶೀಘ್ರವಾಗಿ ನೀರು ಹರಿಯಲಿದೆ ಎಂದು ಹೇಳಿದರು.

     ಜನತೆ ಪಡಿತರ ಚೀಟಿಯನ್ನು ನೀಡುವ ಕಾರ್ಯ ಶೀಘ್ರವಾಗಿ ಆಗಬೇಕಿದೆ ಬಡವರು ಇದನ್ನು ನಂಬಿಕೊಂಡು ಇರುತ್ತಾರೆ ಯಾವುದೇ ಕಾರಣದಿಂದಲೂ ಸಹಾ ನಿಧಾನ ಮಾಡಬೇಡಿ ಈಗ ಬಂದಿರುವ ಅರ್ಜಿಗಳನ್ನು ಶೀಘ್ರವಾಗಿ ಪರಿಶೀಲನೆ ಮಾಡಿ ಪಡಿತರ ಚೀಟಿಗಳನ್ನು ವಿತರಣೆ ಮಾಡಿ ಎಂದು ಸೂಚಿಸಿ, 2020ರ ಜನವರಿ 15ರೊಳಗಾಗಿ ಈಗ ಹಾಕಿರುವ ಅರ್ಜಿಗಳನ್ನು ಪೂರ್ಣ ಪ್ರಮಾಣದಲ್ಲಿ ವಿತರಣೆ ಮಾಡಿ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದರು.

     ಸರ್ಕಾರ ಕೆಲವೊಂದು ಯೋಜನೆಗಳನ್ನು ಜಾರಿ ಮಾಡುತ್ತಿದೆ ಆದರೆ ಅದಕ್ಕ ಫಲಾನುಭವಿಗಳ ಆಯ್ಕೆ ಮಾತ್ರ ಕಷ್ಟವಾಗಿದೆ ಏಕೆಂದರೆ ಒಂದು ಫಲಾನುಭವಿಗೆ ಮಾತ್ರವೇ ಯೋಜನೆ ನೀಡಬೇಕಿದೆ ಇಂತಹ ಯೋಜನೆಗಳಿಂದ ಜನರಿಂದ ವಿರೋಧವನ್ನು ಕಟ್ಟಿಕೊಳ್ಳಬೇಕಿದೆ ಎಂದು ತಿಳಿಸಿ ನ,30 ರಂದು ಪಶು ಇಲಾಖೆಗೆ ಸಂಬಂಧಪಟ್ಟಂತೆ ಸಭೆಯನ್ನು ಮಾಡುವುದರ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದ ಶಾಸಕರು, ಜನತೆಗೆ ಕೋಳಿಗಳನ್ನು ನೀಡುವ ಯೋಜನೆ ಜಾರಿಯಲ್ಲಿದ್ದು ಒಂದು ಕುಟುಂಬಕ್ಕೆ 25 ಕೋಳಿ ಮರಿಗಳನ್ನು ನೀಡಲಾಗುತ್ತದೆ ಇದರಿಂದ ಅವರ ಬದುಕು ಸಾಗಬೇಕೆಂಬ ಉದ್ದೇಶದಿಂದ ನೀಡಲಾಗುತ್ತದೆ ಆದರೆ ಜನತೆ ಅದನ್ನು ಕೊಯ್ದು ತಿನ್ನುತ್ತಾರೆ ಎಚ್ಚರವಾಗಿ ನೀಡಿ ಮಾರಮ್ಮಗ ಹಬ್ಬದ ಸಮಯದಲ್ಲಿ ಮಾತ್ರ ನೀಡಬೇಡಿ ಎಂದಾಗ ಸಭೆ ನಗೆಗಡಲಿನಲ್ಲಿ ತೇಲಿತು.

     ವಿಜಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ 3 ಕೋಟಿ ರೂ.ಗಳನ್ನು ನೀಡಲಾಗಿದೆ ಇದೇ ಸಮಯದಲ್ಲಿ ಗ್ರಾಮದ ಹಟ್ಟಿಗಳಲ್ಲಿ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಿ ಗೋನೂರು ದ್ಯಾಮವ್ವಬಹಳ್ಳಿ ರಸ್ತೆಗೆ ಸಂಬಂಧಪಟ್ಟ 2 ಕೋಟಿ ರೂ, ಕಾಮಗಾರಿಯ ಪ್ರಸ್ತಾವನೆಯನ್ನು ಶೀಘ್ರವಾಗಿ ತರಸಿ ಮುಂದಿನ ಕಾರ್ಯವನ್ನು ಮಾಡುವಂತೆ ಅಧಿಕಾರಿಗೆ ಸೂಚಿಸಿ ನಗರದಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತಿದೆ ಇದಕ್ಕೆ ಹಳೆಯದಾದ ಮರಗಳನ್ನು ಕಡಿಯಲಾಗುತ್ತಿದೆ ಇದರ ಬದಲಿಗೆ ಹೊಸದಾಗಿ ಸಸಿಗಳನ್ನು ನೆಡುವ ಕಾರ್ಯವನ್ನು ಎರಡು ಅರಣ್ಯ ಇಲಾಖೆಗಳು ಮಾಡಬೇಕಿದೆ ಈಗಿನಿಂದಲೇ ಸಸಿಗಳನ್ನು ಬೆಳಸುವ ಕಾರ್ಯವನ್ನು ಮಾಡಿ ಮುಂದಿನ ಜೂನ್ ನಲ್ಲಿ ಸಸಿಗಳನ್ನು ನೆಡಬೇಕು ಎಂದು ಸೂಚಿಸಿದರು.

     ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ,ಗುರುಮೂರ್ತಿ ಚಿತ್ರದುರ್ಗ ತಾ.ಪಂ.ಅಧ್ಯಕ್ಷ ಲಿಂಗರಾಜು, ತಾ.ಪಂ. ಕಾರ್ಯನಿರ್ವಾಹಕ ಕೃಷ್ಣಾನಾಯ್ಕ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link