ಬೆಂಗಳೂರು
ನಗರದಲ್ಲಿ ಸುರಕ್ಷಾ ಆಪ್ ಗಸ್ತು ಹೆಚ್ಚಳ ಇನ್ನಿತರ ಪರಿಣಾಮಕಾರಿ ಕ್ರಮಗಳ ಮೂಲಕ ಮಹಿಳೆಯರ ರಕ್ಷಣೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಹೇಳಿದರು.
ನಗರ ಪೊಲೀಸರು ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಇದಕ್ಕೆ ಸಾರ್ವಜನಿಕರು ಸಂಘಸಂಸ್ಥೆಗಳು ಬೆಂಬಲ ನೀಡಬೇಕು ಮಹಿಳೆಯರ ರಕ್ಷಣೆಗೆ ಸಮಾಜ ಕೂಡ ಕೈ ಜೋಡಿಸಬೇಕು. ಬೀದಿ ದೀಪ, ಸಾರ್ವಜನಿಕ ಸಂಪರ್ಕ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಮುದಾಯ ಪೊಲೀಸಿಂಗ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಕ್ಷಣೆ ನೀಡದೇ ಇದ್ದರೆ ಅದನ್ನು ನಾಗರಿಕ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎನ್ನುವುದನ್ನ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದರು
ಜರ್ಮನ್ನ ಸಂಸದರ ನಿಯೋಗ ನಗರಕ್ಕೆ ಆಗಮಿಸಿ ಮಹಿಳೆಯರ ಸುರಕ್ಷತೆ ಬಗ್ಗೆ ಸಮಾಲೋಚನೆ ನಡೆಸಿದೆ. ಅಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದೆ. ನಾವು ನಮ್ಮ ಅನುಭವಗಳನ್ನು ಹಂಚಿಕೊಂಡಿದ್ದೇವೆ ಎಂದು ಹೇಳಿದರು.
ಜರ್ಮನ್ನ ಸಂಸದರ ನಿಯೋಗ ಬೆಂಗಳೂರಿಗೆ ಬಂದಿದೆ.ಬೆಂಗಳೂರು ಪೊಲೀಸರ ಬಳಿ 65 ಜರ್ಮನ್ ಶಫರ್ಡ್ ನಾಯಿಗಳಿವೆ. ಅವುಗಳಿಗೆ ಇನ್ನಷ್ಟು ಉತ್ತಮ ತರಬೇತಿ ನೀಡಲು ಜರ್ಮನ್ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳುವ ಕುರಿತಂತೆ ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಭಾಸ್ಕರ್ರಾವ್ ಹೇಳಿದರು.
ನಿವೃತ್ತ ಡಿಜಿಪಿ ಡಾ.ಎಸ್.ಟಿ.ರಮೇಶ್ ಮಾತನಾಡಿ, ಯಾವುದೇ ಅತ್ಯಾಚಾರ ಪ್ರಕರಣ ನಡೆದಾಗ ಆರಂಭದಲ್ಲಿ ಬಹಳಷ್ಟು ಜನ ಜೋರು ಗಲಾಟೆ ಮಾಡುತ್ತಾರೆ. ಆನಂತರ ಎಲ್ಲರೂ ಮರೆತು ಹೋಗುತ್ತಾರೆ. ಪೊಲೀಸರು, ನ್ಯಾಯಾಂಗ, ಮಾಧ್ಯಮ, ಸರ್ಕಾರ ಎಲ್ಲವೂ ಘಟನೆಯನ್ನು ಮರೆತು ತಮ್ಮ ಪಾಡಿಗೆ ತಾವು ಬೇರೆ ಕೆಲಸದತ್ತ ಗಮನ ಹರಿಸುತ್ತಾರೆ. ಮಹಿಳೆಯರ ಸುರಕ್ಷತೆ ವಿಷಯದಲ್ಲಿ ಯಾವುದೇ ರಜಿ ಮಾಡಿಕೊಳ್ಳಬಾರದು. ಸೌಲಭ್ಯಗಳ ಇಲ್ಲ ಎಂಬ ನೆಪಗಳನ್ನು ಹೇಳಬಾರದು. ವ್ಯವಸ್ಥೆ ಸರಿಯಿಲ್ಲ ಎಂಬ ಉಡಾಫೆ ತನವೂ ಬೇಡ ಎಂದು ಹೇಳಿದರು.
ಹಿಂದೆ ಬಿದ್ದ ಭಾರತ
ರಾ ಸಂಸ್ಥೆಯ ಮಾಜಿ ಅಧಿಕಾರಿ ಪಿ.ಕೆ.ಹಾರ್ಮಿಸ್ ತರಕಾನ್ ಮಾತನಾಡಿ, ಅಪರಾಧ ತಡೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಹಾಗೆಯೇ ಅಪರಾಧಕ್ಕೆ ಬಲಿಯಾದವರಿಗೆ ಮತ್ತು ಅವರ ಕುಟುಂಬಕ್ಕೂ ರಕ್ಷಣೆ ನೀಡಬೇಕು ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರನ್ನು ನಿಯೋಜಿಸುವಲ್ಲಿ ಭಾರತ ಹಿಂದೆ ಬಿದ್ದಿದೆ. ಸೌಲಭ್ಯಗಳು ಇಲ್ಲ. ರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಜರ್ಮನ್ನ ಸಂಸದರ ನಿಯೋಗದ ಮುಖ್ಯಸ್ಥ ವೋಲ್ಕಮರ್ ಕ್ಲೇನ್ ಮಾತನಾಡಿ, ನಾವು ಬೆಂಗಳೂರಿಗೆ ಬಂದಿದ್ದು ಬಹಳಷ್ಟು ಖುಷಿಯಾಗಿದೆ. ಇಲ್ಲಿನ ವ್ಯವಸ್ಥೆಗಳ ಬಗ್ಗೆ ತಿಳಿದುಕೊಂಡಿದ್ದೇವೆ. ನಮ್ಮ ಅನುಭವಗಳನ್ನು ಹಂಚಿಕೊಂಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.ಜರ್ಮನ್ ಸಂಸದರಾದ ಡಾ.ಜಾರ್ಜ್ಕಿಪೆಲ್, ಡಾ.ಕಾಲೂಸ್ಪೀಠರ್, ಹೆಲಿನ್ವಿವರಿನ್ ಸೋಮರ್, ಸ್ಟೀಫನ್ ಕ್ಯೂಟ್ಯೂವರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
