ಮುಂಬೈ
ದೇಶದ ಉದ್ದಗಲಕ್ಕೂ ಲಾಕ್ಡೌನ್ ಇರುವುದರಿಂದ ಬಡ ಜನರು ಮತ್ತು ಮಧ್ಯಮವರ್ಗದವರ ದೈನಂದಿನ ಬದುಕಿನ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇಎಂಐ, ಬಡ್ಡಿ, ಮನೆ ಬಾಡಿಗೆ, ವಿದ್ಯುತ್ ಬಿಲ್ ಹೀಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದೆ.ಇದೀಗ, ಮಹಾರಾಷ್ಟ್ರ ಸರ್ಕಾರ ಈ ವರ್ಗಕ್ಕೆ ಮನೆ ಬಾಡಿಗೆಯಿಂದ ವಿನಾಯಿತಿ ಘೋಷಿಸಿದೆ. ಲಾಕ್ಡೌನ್ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಬಾಡಿಗೆ ಕೇಳಬಾರದು ಎಂದು ಮಹಾರಾಷ್ಟ್ರ ವಸತಿ ಇಲಾಖೆ ಆದೇಶ ಹೊರಡಿಸಿದೆ.
ಬಾಡಿಗೆ ಕೊಡಿ ಎಂದು ಪೀಡಿಸುವುದು ಮತ್ತು ಬಾಡಿಗೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನೆಯಿಂದ ಖಾಲಿ ಮಾಡಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ವಸತಿ ಇಲಾಖೆ ಸೂಚಿಸಿದೆ. ಇದೇ ವಿಚಾರಕ್ಕೆ ಸಂಬಂದಪಟ್ಟಂತೆ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರಕ್ಕೆ ದೇಶವ್ಯಾಪಿ ಜಾರಿಗೆ ತರುವಂತೆ ಬಾಡಿಗೆಯಿಂದ ವಿನಾಯಿತಿ ಘೋಷಿಸಿ ಎಂದು ಒತ್ತಾಯಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
