ಪಾವಗಡ
ಶಾಶ್ವತ ಬರಪೀಡಿತ ಪ್ರದೇಶದಲ್ಲಿ ಬರ ಒಂದು ಕಡೆಯಾದರೆ, ಇಂದು ಮಹಮಾರಿ ಕೊರೋನಾದಿಂದ ತತ್ತರಿಸಿರುವ ಜನತೆಗೆ ಟೋಲ್ ಕಂಟಕ ಎದುರಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಟೋಲ್ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪಾವಗಡ ತಾಲ್ಲೂಕು ನಂಜುಂಡಪ್ಪ ವರದಿಯ ಪ್ರಕಾರ ಮುಂಚೂಣಿ ಬರಪೀಡಿತ ಪ್ರದೇಶವಾಗಿದ್ದು, ಜನತೆಯ ಹಾಗೂ ರೈತರ ವಲಸೆ ಜೊತೆಗೆ ಇಂದು ಜನರ ಜೀವವÀನ್ನೆ ಕಸಿಯುತ್ತಿರುವ ಕೊವಿಡ್ ಮಹಾಮಾರಿ ಕೂಡ ಸ್ಪೋಟಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪಾವಗಡ ಬಳ್ಳಾರಿ ರಸ್ತೆಯ ಬುಡ್ಡಾರೆಡ್ಡಿಹಳ್ಳಿ ಗ್ರಾಮದ ಬಳಿ ಟೋಲ್ ಸಂಗ್ರಹ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಟೋಲ್ನಿಂದ ಈ ಭಾಗದ ರೈತರ ಹಾಗೂ ಜನ ಸಾಮಾನ್ಯರ ಗಾಯದ ಮೇಲೆ ಬರೆ ಎಳೆಯುವಂತಾಗಿದೆ. ಇಂದು ದಿನ ದೂಡುವುದೆ ಕಷ್ಟಕರವಾಗಿದ್ದು, ಇರುವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬೆಂಬಲ ಬೆಲೆಯಿಲ್ಲ. ಬೆಳೆಗಳಿಗೆ ನಾನಾ ರೀತಿಯ ರೋಗಗಳ ಕಾಟ ಹಾಗೂ ಕೊವಿಡ್ನಿಂದ ಕಳೆದ ಮೂರು ತಿಂಗಳಿನಿಂದ ಜನರಿಗೆ ಕೂಲಿಯಿಲ್ಲದೆ ಜೀವನವೆ ನರಕದರ್ಶವಾಗುತ್ತಿರುವ ಬೆನ್ನಲ್ಲೆ ಟೋಲ್ ನಿರ್ಮಾಣ ಮಾಡುತ್ತಿರುವುದು ದುರಂತವಾಗಿದೆ.
ಪಾವಗಡ ಪಿಡಬ್ಲ್ಯುಡಿ ಇಲಾಖೆಯ ವಿಜಯಕುಮಾರ್ರವರಿಗೂ ಕೂಡ ಯಾವುದೇ ಮಾಹಿತಿ ನೀಡದೆ, ಇಲ್ಲಿ ಟೋಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹಾಲಿ ಶಾಸಕರಿಗೂ, ಮಾಜಿ ಶಾಸಕರಿಗೂ, ಸಂಬಂಧÀ ಪಟ್ಟ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಇಲ್ಲಿ ಟೋಲ್ ನಿರ್ಮಾಣ ನಡೆಯುತ್ತಿದೆ.
ಈ ವಿಚಾರವಾಗಿ ಜಿಪಂ ಸದಸ್ಯರಾದ ಹೆಚ್.ವಿ.ವೆಂಕಟೇಶ್ ಪ್ರತಿಕ್ರಿಯಿಸಿ, ಪಾವಗಡ ಶಾಶ್ವತ ಬರದ ನಾಡಾಗಿದ್ದು, ಜನರ ಜೀವನ ನಡೆಯುವುದೆ ಕಷ್ಟವಾದ ಸಮಯದಲ್ಲಿ ಟೋಲ್ ನಿರ್ಮಾಣ ಜನತೆಗೆ ಹಾಗೂ ರೈತರಿಗೆ ಹೊರೆಯಾಗಲಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳ ಬಳಿ ಮಾತನಾಡಿ ಟೋಲ್ ತೆರವುಗೊಳಿಸುವ ಪ್ರಯತ್ನ ಮಾಡಿ ಜನತೆಯ ಹಾಗೂ ರೈತರ ಹಿತ ಕಾಪಾಡಲಾಗುವುದೆಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
