ಎಂ ಎನ್ ಕೊಟೆ :
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಮಲ್ಲೇನಹಳ್ಳಿ ರಸ್ತೆಯಿಂದ ಜೈನಿಗರಹಳ್ಳಿ ರಸ್ತೆ ತೀವ್ರ ಹದ್ದಗೆಟ್ಟಿದ್ದು ಕಳಪೆ ಕಾಮಾಗಾರಿ ಮಾಡಿದ್ದಾರೆ ಸುಮಾರು 5 ಕಿ.ಮಿ. ದೂರದವರಿಗೂ ರಸ್ತೆ ಕಿತ್ತು ಹೋಗಿದ್ದು ಸುಮಾರು ಮೂರು ತಿಂಗಳು ಒಳಗೆ ಈ ರಸ್ತೆ ಕಿತ್ತುಹೋಗಿದೆ ಸಂಬಂಧಪಟ್ಟ ಅಧಿಕಾರಿಗಳು ಕಳಪೆ ಕಾಮಾಗಾರಿ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಜೈನಿಗರಹಳ್ಳಿಯಿಂದ ಶಿರಾ , ನೆಲ್ಲಿಗೆರೆ ಹೆದ್ದಾರಿವರೆಗೂ ಕಲ್ಪಿಸುವ ರಸ್ತೆಯನ್ನ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಕಳಪೆ ಕಾಮಾಗಾರಿ ಮಾಡಿ ಹಣವನ್ನು ಲೂಟಿ ಮಾಡಿದ್ದಾರೆ ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲೂ ಸುಸಜ್ಜಿತವಾದ ರಸ್ತೆಯನ್ನು ಮಾಡಬೇಕು ಎಂದು ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದೆ ಈ ರಸ್ತೆ ಮೂರು ತಿಂಗಳಿನಲ್ಲಿ ಕಿತ್ತು ಹೋಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸುಮಾರು 5 ಕಿ.ಮೀ.ರಸ್ತೆ ಮುಂಜಾರು ಆಗಿದ್ದು 5 ಕಿ.ಮಿ. ರಸ್ತೆಯಲ್ಲಿ ಗುಂಡಿಗಳು ಅಲ್ಲಲ್ಲಿ ರಸ್ತೆ ಕಿತ್ತು ಹೋಗಿದೆ ಕಳಪೆ ಗುಣಮಟ್ಟದ ಕಾಮಾಗಾರಿಯನ್ನು ಮಾಡಿದ್ದಾರೆ.ಜೈನಿಗರಹಳ್ಳಿಯಿಂದ ಶಿರಾ ನೆಲ್ಲಿಗೆರೆ ರಸ್ತೆವರೆಗೂ ಸಂಪರ್ಕವಿರುವ ರಸ್ತೆ ಹಳಾಗಿದೆ ಇದಕ್ಕೆ ನೇರ ಹೋಣೆ ಇಂಜಿನಿಯರ್ ಹಾಗು ಗುತ್ತಿಗೆದಾರರೇ ಹೊಣೆಯಾಗಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರೀಶಿಲಿಸಿ ಇಂಜನಿಯರ್ ನ್ನು ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮತ್ತೆ ತೋಟದಪಾಳ್ಯ ಗೇಟ್ ನಿಂದ ಮತ್ತೇ 5 ಕಿ.ಮೀ. ವರೆಗೂ ರಸ್ತೆಯನ್ನು ಪುನಾರ್ ಆರಂಭ ಮಾಡಬೇಕು ಎಂದು ಸಾರ್ವಜನಿಕರು ಓತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
