ತಿಪಟೂರು : ನಗರಸಭೆ ಇ-ಖಾತೆಯಲ್ಲಿ ಭ್ರಷ್ಟಾಚಾರ ; ಸದಸ್ಯರ ಆಕ್ರೊಶ!!

 
ತಿಪಟೂರು :


      ನಗರಸಭೆಯಲ್ಲಿ ಇ ಖಾತೆ ಮಾಡಿಸಿಕೊಳ್ಳಲು ಅರ್ಜಿಕೊಟ್ಟು 3-4 ತಿಂಗಳು ಕಳೆದರೂ ಖಾತೆ ಆಗಲ್ಲ, ಆದರೆ ದಲ್ಲಾಳಿಗೆ 5 ಸಾವಿರ ಕೊಟ್ಟರೆ ಕೆಲವೇ ಗಂಟೆಗಳಲ್ಲಿ ಇ-ಖಾತೆ ಆಗುತ್ತದೆ. ಇದು ನಗರಸಭೆಯಲ್ಲ ನರಕಸಭೆ ಎಂದು ಆರೋಪಿಸಿದ ಸದಸ್ಯರು, ಇದಕ್ಕೆ ಬೇಕಾದ ಸಾಕ್ಷದ ಸಿ.ಡಿ.ಯನ್ನು ಬಿಡುಗೆಮಾಡಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.

      ನಗರಸಭೆಯ ಅಧಿಕಾರ ವಹಿಸಿಕೊಂಡು ಹೊಸ ಸದಸ್ಯರೊಂದಿಗೆ ಅಧ್ಯಕ್ಷ ಪ್ರಥಮ ಸಭೆಯಲ್ಲೇ ಇಂತಹ ಭ್ರಷ್ಟಾಚಾರದ ಆರೋಪವನ್ನು ಸಾಕ್ಷಿ ಸಮೇತ ಬಿಡುಗಡೆಮಾಡಲು ಸಭೆಯಲ್ಲಿಯೇ ಅನುಮತಿ ನೀಡಬೇಕು, ಇದಕ್ಕೆ ತಕ್ಕದಾದ ವ್ಯವಸ್ಥೆಯನ್ನು ಕೂಡಲೇ ಮಾಡಬೇಕೆಂದು ನಗರಸಭಾ ಸದಸ್ಯ ಶ್ರೀನಿವಾಸ್ ಆಗ್ರಹಿಸಿದಾಗ ಇದು ಅಜೆಂಡಾದಲ್ಲಿ ಇಲ್ಲ ಮುಂದಿನ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸೋಣವೆಂದು ಆಯುಕ್ತರು, ಅಧ್ಯಕ್ಷರು ತಿಳಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ಶ್ರೀನಿವಾಸ್, ನಾನು ನನ್ನದೇ ಆದ ಖಾತೆಯನ್ನು ಮಾಡಿಸಿಕೊಳ್ಳಲು ಅರ್ಜಿಕೊಟ್ಟು 3 ತಿಂಗಳಾದರೂ ಆಗಲಿಲ್ಲ, ಆದರೆ ಇನ್ನೊಂದು ಖಾತೆಯನ್ನು ಈ ಸ್ವತ್ತು ಮಾಡಿಸಲು ನಾನು ತಿಪಟೂರಿನ ಉಪ ನೊಂದಣಾಧಿಕಾರಿಗಳ ಕಛೇರಿಗೆ ಹೋದಾಗ ಇ-ಖಾತೆ ಇಲ್ಲದೆ ಆಸ್ತಿಯನ್ನು ನೊಂದಣಿ ಮಾಡಲು ಆಗುವುದಿಲ್ಲ, ನಗರಸಭೆಗೆ ಹೋಗಿ ನಾನು ಹೇಳುತ್ತೇನೆ ಎಂದು ತಿಳಿಸಿದರು. ಅದರಂತೆಯೇ ನಾನು ಬಂದು ಇಲ್ಲಿ ಇ-ಖಾತೆಮಾಡಲು 5 ಸಾವಿರಗಳನ್ನು ಕೊಡುತ್ತಿದಂತೆಯೇ ಇ-ಖಾತೆ ಆಯಿತು. ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು. ಅಲ್ಲದೇ ಇಲ್ಲಿ ರೆವಿನ್ಯೂ ಅಧಿಕಾರಿಯೊಬ್ಬರು ಭಷ್ಟಾಚಾರದಲ್ಲಿ ತೊಡಗಿರುವುದು ಅವರ ವರ್ಗಾವಣೆ ಆದಾಗ ಹಾರ ತುರಾಯಿ ಹಾಕಿ ಬೀಳ್ಕೊಡಿಗೆ ಮಾಡಲಾಗಿದೆ ಎಂದು ಆರೋಪಿಸಿದರು.

      ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ನಾನು ಜೂನ್ 3 ರಿಂದ ಸುಮಾರು 1300 ಖಾತೆಗಳನ್ನು ಮಾಡಿಸಿದ್ದೇನೆ, ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆದಿಲ್ಲ ಎಂದರು. ಹಿಂದೆ ವರ್ಗಾವಣೆಯಾಗಿರುವ ಅಧಿಕಾರಿಯ ವಿರುದ್ಧ ನಾವು ದೂರನ್ನು ಸಲ್ಲಿಸಿದ್ದು ಅದು ತನಿಖೆಯಲ್ಲಿದೆ ಎಂದು ತಿಳಿಸಿದರು.

      ನಾನು ದಾಖಲಾತಿ ಸರಿ ಇಲ್ಲದ, ಟೂಡಾ ಅನುಮತಿ ಇಲ್ಲದ ನಿವೇಶನಗಳನ್ನು ಈ ಸವತ್ತು ಮಾಡಲಾಗಿಲ್ಲವೆಂದು ಸಮಾಜಾಯಿಶಿ ನೀಡಿದರು. ಈ ಸಂದರ್ಭದಲ್ಲಿ ಹಳೇಪಾಳ್ಯದ ರಘುಚರಣ್ ಎಂಬ ವ್ಯಕ್ತಿಯ ಟೂಡಾ ಅನುಮತಿ ಇಲ್ಲದ ನಿವೇಶನವನ್ನು ನೀವು ಇ-ಖಾತೆ ಮಾಡಿಕೊಟ್ಟಿದ್ದಿರೆಂದು ನಗರಸಭಾ ಸದಸ್ಯರಾದ ಯೋಗೀಶ್ ಮತ್ತು ಪ್ರಕಾಶ್ ಸಾಕ್ಷಿ ಸಮೇತ ಹಾಜರುಪಡಿಸಿದರು.

      ಇದಕ್ಕೆ ಸಂಬಂದಿಸಿದಂತೆ ಪೌರಾಯುಕ್ತರು ಮಾತನಾಡಿ, ಮಾನವರೆಂದ ಮೇಲೆ ತಪ್ಪು ಸಹಜ ಇದೊಂದು ತಪ್ಪು ನನ್ನಿಂದ ಆಗಿದ್ದು ಇದನ್ನು ನಾನು ಮತ್ತೆ ಹಿಂದಿನ ಖಾತೆದಾರರಿಗೆ ಖಾತೆಮಾಡಲು ಕ್ರಮಹಿಸಿಲಾಗಿದೆ ಎಂದು ರಿಜಿಸ್ಟರ್‍ನಲ್ಲಿ ತೋರಿಸಿದರು.

      ನೀವು ಹೇಳುವ ಹಾಗೆ 1300 ಖಾತೆಗಳಲ್ಲಿ ಇದೇ ರೀತಿ ತಪ್ಪುಗಳು ಏಕೆ ಆಗಿಲ್ಲ ಎಂಬುದು ನಮಗೆ ತಿಳಿಯದಾಗಿದೆ ಹಾಗೂ ನಗರದಲ್ಲಿ ತಮ್ಮ ಉಳಿತಾಯದ ಹಣದಲ್ಲಿ ಚಿಕ್ಕಪುಟ್ಟ ನಿವೇಶನಗಳನ್ನು ಖರೀದಿಸಿ ಮನೆಕಟ್ಟು ಸಾಲಕ್ಕಾಗಿ ಪರದಾಡುತ್ತಿದ್ದರೆ ಇನ್ನು ಕೆಲವರು ತಮ್ಮ ಮಕ್ಕಳ ಮದುವೆ ಮಾಡಲು ನಿವೇಶನವನ್ನು ಮಾರಲು ಹೊರಟೆ ಇ-ಖಾತೆಯಾಗದೆ ಎಲ್ಲೂ ಸಾಲ ದೊರೆಯುತ್ತಿಲ್ಲ ಮತ್ತು ಮಾರಾಟಮಾಡಲು ಆಗುತ್ತಿಲ್ಲ ಇದರ ಬಗ್ಗೆ ಸೂಕ್ತಕ್ರಮ ವಹಸಿಬೇಕೆಂದು ನಗರಸಭಾ ಸದಸ್ಯ ಯೋಗೀಶ್.ವಿ ಸಭೆಗೆ ತಿಳಿಸಿದರು.

      ಗುತ್ತಿಗೆ ನೌಕರರನ್ನು ಬದಲಿಸಿ ನಗರಸಭೆಯಲ್ಲಿ ಅದರಲ್ಲೂ ಕಂದಾಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ನೌಕರರು ದಲ್ಲಾಳಿಗಳಾಗಿದ್ದಾರೆ. ಒಂದು ಖಾತೆ 3 ರಿಂದ 5 ಸಾವಿರವೆಂದರೆ 1000 ಖಾತೆಗೆ 3 ರಿಂದ 5 ಲಕ್ಷ ಭ್ರಷ್ಟಾಚಾರವಾಗುತ್ತದೆ. ಮೊದಲು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಬದಲಿಸಿ ನಗರಸಭೆಯನ್ನು ಕಾಪಾಡಿ ಎಂದು ನಗರಸಭಾ ಸದಸ್ಯ ಶ್ರೀನಿವಾಸ್ ಆಗ್ರಹಿಸಿದರು.

      ಇಲ್ಲ ಎಲ್ಲಾ ಆರೋಪಗಳಿಂದ ನಗರಸಭೆಯು ಹೊರಬರಲು ನೂತನ ನಗರಾಧ್ಯಕ್ಷರು ಹಾಗೂ ಪೌರಾಯುಕ್ತರು ಹೇಗೆ ಕ್ರಮ ತೆಗೆದುಕೊಂಡು ನಗರದ ಜನತೆಗೆ ಸ್ವಚ್ಚ ಆಡಳಿತವನ್ನು ಕೊಡುತ್ತಾರೋ ಎಂಬುದು ಕೆಲವೇ ದಿನಗಳಲ್ಲಿ ಜನತೆಗೆ ತಿಳಿಯಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link