ತುರುವೇಕೆರೆ :
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಸಲುವಾಗಿ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವ ಅಭಿಯಾನಕ್ಕೆ ಗುರುವಾರ ಆದಿಚುಂಚನಗಿರಿ ಮಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಚಾಲನೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಿರಿಯ ಮುಖಂಡ ಡಾ.ಚೌದ್ರಿ ನಾಗೇಶ್ ಮಾತನಾಡಿ, ತಾಲೂಕಿನ ವಿವಿಧೆಡೆ ಸಾರ್ವಜನಿಕರಿಂದ ಜನವರಿ 15 ರಿಂದ ಫೆಬ್ರವರಿ 15 ರೊಳಗೆ ನಿಧಿ ಸಂಗ್ರಹಣಾ ಕಾರ್ಯ ನಡೆಯಲಿದೆ. ನಿಧಿ ಸಂಗ್ರಹಣಾ ಅಭಿಯಾನದ ಚುಂಚನಗಿರಿಯ ಶ್ರೀಗಳು 10, 100, 1000 ರೂಗಳ ಕೂಪನ್ ಗಳನ್ನು ಬಿಡುಗಡೆಗೊಳಿಸಿದ್ದಾರೆ. ಎರಡು ಸಾವಿರಕ್ಕಿಂತ ಹೆಚ್ಚು ಹಣ ನೀಡಿದವರು ನೇರವಾಗಿ ರಾಮಮಂದಿರ ನಿಧಿ ಸಂಗ್ರಹಣಾ ಬ್ಯಾಂಕ್ ಖಾತೆಗೆ ಹಾಕಬಹುದು. ಇದಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಡಿ.ಜಿ.ರಂಗಸ್ವಾಮಿ, ಟಿ.ಎಸ್.ಬೋರೇಗೌಡ, ಕಾರ್ಯವಾಹ ತಂಡಗ ರವಿ, ತಾಲೂಕು ಬಿಜೆಪಿ ಅಧ್ಯಕ್ಷ ಹೆಡಿಗೇಹಳ್ಳಿ ವಿಶ್ವನಾಥ್, ಮುನಿಯೂರು ರಂಗಸ್ವಾಮಿ, ದಿವಿತ್, ಗಂಗಾಧರ ಸ್ವಾಮಿ, ಭಜರಂಗದಳದ ನವೀನ್ ಬಾಬು, ಜಯಂತ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
