ತಿಪಟೂರು : ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಭರವಸೆ

 ತಿಪಟೂರು : 

      ತಾಲ್ಲೂಕಿನಲ್ಲಿ ಸುಮಾರು 10 ಸಾವಿರಕ್ಕಿಂತ ಹೆಚ್ಚಾಗಿ ಅಸಂಘಟಿತ ಕಾರ್ಮಿಕರಿದ್ದು ಅವರಿಗೆ ಸ್ವಂತ ಖರ್ಚಿನಲ್ಲಿ ಕಾರ್ಮಿಕರ ಸ್ಮಾರ್ಟ್‍ಕಾರ್ಡ್ ಮಾಡಿಸಿಕೊಡುತ್ತೇನೆಂದು ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.

      ನಗರದ ಖಾಸಗಿ ಹೋಟೆಲ್‍ನಲ್ಲಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದವತಿಯಿಂದ 43 ವಲಯಗಳ ಅಸಂಘಟಿತ ಕಾರ್ಮಿಕರನ್ನು ಗುರುತಿಸಿದ್ದು 2017-18ನೇ ಸಾಲಿನಲ್ಲಿ ಅಂಬೇಡ್ಕರ್ ಕಾಮೀಕ ಸಹಾಯ ಹಸ್ತ ಯೋಜನೆಯ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡುತ್ತಿದ್ದು ಇದರಿಂದ ಹಮಾಲರು, ಚಿಂದಿ ಆಯುವವರು, ಗೃಹಕಾರ್ಮಿಕರು, ಟೈಲರ್‍ಗಳು ಹಾಗೂ ಮೆಕಾನಿಕ್ ಹಾಗೂ ಮಡಿವಾಳರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಟೈಲರ್ ಹಾಗೂ ಬಟ್ಟೆ ಕಾರ್ಮಿಕರುಗಳು ಈ ಕೊರೊನಾ ಸಂದರ್ಭದಲ್ಲಿ ಬದುಕುವುದೇಕಷ್ಟವಾಗಿರುವಾಗಅವರಿಗೆ ನಾನು ನನ್ನ ಸ್ವಂತಖರ್ಚಿನಿಂದ ಸ್ಮಾರ್ಟ್‍ಕಾರ್ಡ್‍ಗಳನ್ನು ಕೊಡಿಸುವ ಕೆಲಸವನ್ನು ಮಾಡುತ್ತೆನೆಂದು ತಿಳಿಸಿದರು.

     ನಗರದಲ್ಲಿರುವ ಕಾರ್ಮಿಕ ಕಲ್ಯಾಣಾಧಿಕಾರಿಗಳ ಕಛೇರಿ ಎಲ್ಲಿದೆ ಎಂಬುದೇ ಜನರಿಗೆ ಗೊತ್ತಿಲ್ಲ, ಇನ್ನು ಗೊತ್ತಿರುವ ಜನರು ಯಾವಾಗ ಹೋದರು ಬೇರೆಬೇರೆ ತಾಲ್ಲೂಕುಗಳ ಕಾರ್ಯಬಾರ ಇರುವುದರಿಂದ ಬಹುತೇಕ ದಿನಗಳಲ್ಲಿ ಮುಚ್ಚಿರುತ್ತದೆ ಇದರಿಂದಲೇ ಕೆಲವರು ಕಾರ್ಡ್ ಮಾಡಿಸಲು ಹೋಗಿಲ್ಲ ಅದಕ್ಕಾಗಿ ನಮ್ಮಕಾರ್ಮಿಕರ ನೋವನ್ನು ನೋಡಲಾಗದೆ ನಾನೇ ಮುಂದೆ ನಿಂತು ಎಲ್ಲರಿಗೂ ಸ್ವಂತ ಖರ್ಚು 500ರೂ ಆದರೂ ಸಹ ನಾನೇ ಕಾರ್ಮಿಕರ ಸ್ಮಾರ್ಟ್‍ಕಾರ್ಡ್ ಮಾಡಿಸುತ್ತೇನೆ ಎಂದರು.

     ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ತಿಪಟೂರು ಅಧ್ಯಕ್ಷ ಸರ್ವೇಶಚಾರ್, ಹೇಮಂತ್, ಮುಂತಾದವರಿದ್ದರು.

ಕಛೇರಿ ಸಂಪರ್ಕಿಸಿ :

      ಕಾರ್ಮಿಕರ ಸ್ಮಾರ್ಟ್‍ಕಾರ್ಡ್ ಮಾಡಿಸಿಕೊಡುತ್ತೇವೆಂದು ಹಲವಾರು ಜನರು ಜನರಿಂದ ಹಣವನ್ನು ಪಡೆಯುತ್ತಿದ್ದು ಕಂಡು ಬಂದಿದೆ, ಹಾಗೂ ಕಾರ್ಮಿಕರ ಸ್ಮಾರ್ಟ್‍ಕಾರ್ಡ್ ಮಾಡಿಸಲು 25ರೂ ಸರ್ಕಾರಕ್ಕೆ ಕಟ್ಟಬೇಕು ಇನ್ನು ಆನ್‍ಲೈನ್ ಸೆಂಟರ್‍ನಲ್ಲಿ ಅರ್ಜಿಸಲ್ಲಿಸದರೆ ಸಾಕು ಆಗುತ್ತದೆ. ಅದಕ್ಕಾಗಿ ಹೆಚ್ಚಿನ ಹಣವನ್ನು ಯಾರಿಗೂ ಕೊಡಬೇಡಿ ಹಾಗೂ ಇದನ್ನು ಮಾಡಿಸಿಕೊಡಲು ಯಾವುದೇ ಸಂಸ್ಥೆಯು ಇಲ್ಲ, ಇದು ಸರ್ಕಾರದ ಯೋಜನೆಯಾಗಿದ್ದು ಎಲ್ಲಾ ಕಾರ್ಮಿಕರು ಬಳಸಿಕೊಳ್ಳಿ, ವಿವರಗಳಿಗೆ ಸಂಪರ್ಕಿಸಿ : 9481491634.

-ಮಹದೇವ್
ಕಾರ್ಮಿಕಕಲ್ಯಾಣಾಧಿಕಾರಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link