ತಿಪಟೂರು :
ಕಲ್ಪತರು ನಾಡು ಎಂದರೆ ಎಂದಿಗೂ ಜಗ್ಗದ ಕರುಣಾಮಯಿ ಎಂದು ಪದೆ ಪದೆ ಸಾಬಿತಾಗುತ್ತಲೆ ಇದೆ ರೀತಿ ಕೊರೋನಾ 2ನೇ ಅಲೆಗೆ ಭಾರತವು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಎಷ್ಟೇ ಸೋಂಕಿತರು ಬಂದರು ನಾವು ಎಲ್ಲರಿಗೂ ಚಿಕಿತ್ಸೆಅ ಕೊಡುತ್ತೇವೆಂದು ತಿಪಟೂರಿನ ಡಾಕ್ಟರ್ಗಳು ದೇಶಕ್ಕೆ ಮಾದರಿಯಾಗುತ್ತಿದ್ದಾರೆ.
ದೇಶದಲ್ಲಿ ದಿನ ವೊಂದಕ್ಕೆ ಸುಮಾರು 3 ಲಕ್ಷ ಕ್ಕೂ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದು ಎಷ್ಟೂ ನಗರಗಳಲ್ಲಿ ಸೋಂಕಿತರಿಗೆ ಹಾಸಿಗೆ ಇಲದೆ ಒದ್ದಾಡುವ ದೃಶ್ಯ, ರಸ್ತೆ ರಸ್ತೆಗಳಲ್ಲಿ ರೋಗಿಗಳಿಗೆ ಆಕ್ಸಿಜನ್ ಹಾಕಿ ಕಾಯದ್ದು ಕುಳಿತಿರುವ ಮತ್ತು ಚಿತಾಗಾರದ ಮುಂದಿನ ಹೆಣಗಳ ಸರದಿ, ಬಂದುಗಳ ಆಕ್ರಂದನವನ್ನು ನೋಡಿದರೆ ಎಂತಹವರ ಕರುಳು ಕಿತ್ತುಬರುವ ಸನ್ನಿವೇಶಗಳನ್ನು ನೋಡಿ ಎಷ್ಟೂ ಜನ ಮರು ಗುತ್ತಿದ್ದು ಇದ್ದರಲ್ಲಿ ನಮ್ಮ ಊರು ಪರವಾಗಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಇವೆಲ್ಲವನ್ನು ಕಂಡು ಕಲ್ಪತರು ನಾಡು ತಿಪಟೂರಿನ ಡಾಕ್ಟರ್ಗಳಿಗಾ ತಾಮುಂದು ತಾಮುಂದು ಎಂದು ಸಮುದಾಯ ಭವನಗಳು, ಛತ್ರಗಳನ್ನು ಬಾಡಿಗೆಗೆ ತೆಗೆದುಕೊಂಡು ಟ್ರಸ್ಟ್ಗಳ ಸಹಕಾರ ದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ರೋಗಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ದೊರೆಯುವಂತೆ ಆಸ್ಪತ್ರೆಗಳಾಗಿ ಮಾರ್ಪಡಿಸುತ್ತಿದ್ದು. ನಮ್ಮ ಊರಿನ ರೋಗಿಗಳನ್ನು ಕೊರೋನಾ ವಿರುದ್ಧ ಗೆಲ್ಲುವ ವಿಶ್ವಾಸವನ್ನು ಮೂಡಿಸುತ್ತಿದ್ದಾರೆ.
ಡಾ.ಶ್ರೀಧರ್ಎಂಬ ಕರುಣಾ ಮಯಿ:
ರಾಜ್ಯದಲ್ಲಿ ಕಳೆದ ವರ್ಷ ಕೊರೋನಾ ಬಂದ ಸದರ್ಭದಲ್ಲಿ ಜನಸಮಾನ್ಯರಿಗೆ ತೊಂದರೆಯಾಗುತ್ತಿದೆ. ಎಂಬುದನ್ನು ತಿಳಿದು ಮೊದಲಿಗೆ ಆರಕ್ಷಕರಿಗೆ ಸ್ಯಾನಿಟೈಸಿಂಗ್ ಮತ್ತು ಉತ್ತಮ ಗುಣಮಟ್ಟದ ಮಾಸ್ಕ್ಗಳನ್ನು ವಿತರಿಸಲು ಪ್ರಾರಂಬಿಸಿದಾಗ ಇವರಿಕ್ಕಿಂತ ಇನ್ನೂ ನಿರ್ಗತಿಕರು ಕೂಲಿ ಕೆಲಸದವರು ಊಟವಿಲ್ಲದೆ ಪರದಾಟುತ್ತಿರುವ ಸನ್ನಿವೇಶವನ್ನು ಕಂಡು ಡಾ. ಶ್ರೀಧರ್ ಅವರು ಬಡವರಿಗೆ ಆಹಾರದ ಕಿಟ್ಗಳನ್ನು ನೀಡಿ ಅವರಿಗೆ ಸಗತ್ಯ ಔಷದೋಪಚಾರವನ್ನು ಮಾಡಿದರು.ಎಲ್ಲಾ ಡಾಕ್ಟರ್ಗಳು ಕೊರೋನಾ ಎಂದು ದೂರ ಸರಿದ ಸಂದರ್ಭದಲ್ಲಿ ವೈದ್ಯೋ ನಾರಾಯಣೊ ಹರಿ ಎಂಬ ಮಾತಿನಂತೆ ಎಲ್ಲರಿಗೂ ಸೂಕ್ತ ಚಿಕಿತ್ಸೆಯನ್ನು ನೀಡಿದರು.
ಈ ಬಾರಿ 2 ನೇ ಅಲೆಯ ಘೋರ ಸನ್ನಿವೇಶ ಎದುರಾಗುತ್ತಿರುವುದನ್ನು ಮನಗಂಡು ಮಲ್ಲಿಕಾರ್ಜುನ ಸ್ವಾಮಿ ಟೆಂಪಲ್ ಟ್ರಸ್ಟ್ ಜಿಲ್ಲಾಡಳಿತದ ಸಹಯೋಗ ದೊಂದಿಗೆ ತಿಪಟೂರಿನಲ್ಲಿ ಮೊದಲನೆಯದಾಗಿ ಸಿಂಗ್ರಿನಂಜಪ್ಪವರ ಕಲ್ಯಾಣ ಮಂಟಪ ದಲ್ಲಿ ಸುಜ್ಜಿತವಾದ ಕೋವಿಡ್ ಕೇರ್ ಮತ್ತು ಟೆಸ್ಟ್ ಸೆಂಟರ್ ಪ್ರಾರಂಭಿಸಿ ನಾನು ನಿಮ್ಮೊಂದಿಗೆ ಇದ್ದೇನೆ ಆದರೆ ನೀವು ಕೋವಿಡ್ ನಿಯಮಗಳನ್ನು ಪಾಲಿಸಿ ಧೈರ್ಯದಿಂದ ಇರಿ ಎಂದು ಧೈರ್ಯವನ್ನು ತುಂಬುತ್ತಿದ್ದು ಎಲ್ಲಾ ರೋಗಿಗಳಿಗೂ ಉಚಿತವಾದ ಊಟ-ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದಾರೆ.
4 ಆಂಬ್ಯುಲೆನ್ಸ್ಗಳು ಸಿದ್ಧ :
ಕುಮಾರ್ ಆಸ್ಪತ್ರೆ ಎಂದರೆ ಬಡವರ ಆಸ್ಪತ್ರೆ ಇಲ್ಲಿ ಡಾಕ್ಟರ್ ಬಂದ ರೋಗಿಗಳ ಆರೋಗ್ಯವನ್ನು ವಿಚಾರಿಸಿ ದುಡ್ಡಿಲ್ಲದಿದ್ದರೆ ಮಾತ್ರೆ ಯೊಂದಿಗೆ ಬಸ್ ಸೌಕರ್ಯಕ್ಕೆ ಹಣವನ್ನು ಕೊಟ್ಟು ಕಳುಹಿಸುತ್ತಿದ್ದು. ತಾಲ್ಲೂಕಿನಲ್ಲಿ ಕುಮಾರ್ ಆಸ್ಪತ್ರೆ ಎಂದರೆ ಖಾಸಗಿ ಸಾರ್ವಜನಿಕ ಆಸ್ಪತ್ರೆ ಯಾಗಿದೆ. ಇಲ್ಲಿ ರೋಗಿಗಳ ಸೇವೆಗೆ 4 ಆಂಬ್ಯುಲೆನ್ಸ್ಗಳು ಸದಾ ಸಿದ್ದವಾಗಿದ್ದು. ಹೆಚ್ಚಿನ ಪ್ರಾಣ ರಕ್ಷಣೆಯನ್ನು ಮಾಡುತ್ತಿದ್ದಾರೆ.ಇಲ್ಲಿಗೆ ಬರುವ ರೋಗಿಗಳು ಕೊಟ್ಟಷೇ ಹಣವನ್ನು ತೆಗೆದುಕೊಂಡು ಸೇವೆಯನ್ನು ನಾರಾಯಣನ ಸೇವೆಂದು ತಿಳಿದು ದುಡಿಯುತ್ತಿರುವ ಡಾ.ಶ್ರೀಧರ್ ದಂಪತಿಗಳು ನಿಜ್ಜಕ್ಕೂ ಧನ್ವಂತರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಇಷ್ಟೆ ಅಲ್ಲದೆ ಪ್ರವಾಹ ಬಂದ ಸಂದರ್ಭದಲ್ಲಿ ತಮ್ಮ ಸತ್ಯಕುಮಾರ್ ಫೌಂಡೇಶನ್ನ ವತಿಯಿಂದ ನೆರೆ ಪೀಡಿದ ಪ್ರದೇಶಗಳಿಗೆ ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಅಲ್ಲಿಯೆ ಆಹಾರ ತಯಾರಿಸಿ ಕೊಟ್ಟಿದ್ದಲ್ಲದೆ ಎಲ್ಲರಿಗೂ ಔಷದೋಪಚಾರವನ್ನು ಮಾಡಿದ್ದಾರೆ.
ಆಸ್ಪತ್ರೆಯಾದ ಶ್ರೀ ಸತ್ಯ ಗಣಪತಿ ಅಮೃತ ಮಹೋತ್ಸವ ಭವನವ ಶ್ರೀ ಸತ್ಯಗಣಪತಿ ಸೇವಾ ಸಂಘ ಜಿಲ್ಲಾಡಳಿತ ತಿಪಟೂರು ಹೆಲ್ತ್ ಸೆಂಟರ್ ಜೇನುಕಲ್ ಆಸ್ಪತ್ರೆ ಮತ್ತು ಬಿದರೆಲಿಂಗಪ್ಪ ಆಸ್ಪತ್ರೆ ಯವರ ಸಹಯೋಗದಲ್ಲಿ ಶ್ರೀ ಸತ್ಯಗಣಪತಿ ಸೇವಾ ಸಂಘದ ಶ್ರೀ ಸತ್ಯ ಗಣಪತಿ ಅಮೃತ ಮಹೋತ್ಸವ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಲಾಗಿದ್ದು. ಇಂದು ಶಾಸಕ ಬಿ.ಸಿ ನಾಗೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿಯಾದ ಡಾ. ಕೆ. ಕೋನಂ ವಂಶೀಕೃಷ್ಣ ರವರು ಕೋವಿಡ್ಕೇರ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್ಕೇರ್ ಸೆಂಟರ್ಆದ ಸಮಾಜ ಕಲ್ಯಾಣ ಇಲಾಖೆ ಹಾಸ್ಟಲ್: ಇನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಬೆಟ್ಗಳ ವ್ಯವಸ್ಥೆ ಇದ್ದು, ಇದಲ್ಲದೆ ಸರ್ಕಾರದ ವತಿಯಿಂದ 120 ಹಾಸಿಗೆಗಳ ವ್ಯವಸ್ಥಿತ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ.
ಉಚಿತವಾಗಿ ಸೇವೆ ಮಾಡುತ್ತಿರುವವರನ್ನು ಕಂಡು ಇನ್ನಷ್ಟು ಡಾಕ್ಟರ್ಗಳು ಇದೆ ರೀತಿ ಕೆಲಸವನ್ನು ಮಾಡಿ ಜನ ಸೇವೆಗೊಂದು ಸಂದರ್ಭವೆಂದು ತಿಳಿದು ಸೇವೆ ಮಾಡಬೇಕಾದ ಪರಿಸ್ಥಿತಿ ಇದ್ದು ಸದ್ಯ ತಿಪಟೂರಿನ ಡಾಕ್ಟರ್ಗಳು ದೇಶಕ್ಕೆ ಮಾದರಿಯಾಗುತ್ತಿದ್ದಾರೆ.
ಮುಂದಿನ ದಿನಗಳು ಕೊರೋನಾ ವಿರುದ್ಧ ಯುದ್ಧದ ಸಮಯವಾಗಿದ್ದು. ನಾವೆಲ್ಲಾರು ಹೋರಟ ಮಾಡಬೇಕಾದ ಸನ್ನಿವೇಶವಿದೆ. ನಾವು ಜೀವಗಳನ್ನು ಉಳಿಸಿಕೊಂಡರೆ ಸಾಕೇಂಬ ಪರಿಸ್ಥಿತಿ ಇದ್ದು ಇಲ್ಲಿ ದುಡಿಯುವುದು ಮುಖ್ಯವಲ್ಲ ಜನಗಳ ಆರೋಗ್ಯ ಮುಖ್ಯ ಎಂದು ಜನರೊಂದಿಗೆ ನಾವಿದ್ದೇವೆ ಹೆದರಬೇಡಿ ಆದರೆ ಎಚ್ಚರಿಕೆಯಿಂದ ಇರಿ ಸುಖಾ ಸುಮ್ಮನೆ ಮನೆ ಇಂದ ಹೊರ ಬರಬೇಡಿ
ರಂಗನಾಥ್ ಪಾರ್ಥಸಾರಥಿ
ರಂಗನಾಥ್ ಪಾರ್ಥಸಾರಥಿ
