ಪಾವಗಡ : ಬಸ್ ಏಜೆಂಟರುಗಳಿಗೆ ದಿನಸಿ ಕಿಟ್ ವಿತರಣೆ

ಪಾವಗಡ :

      ತಾಲ್ಲೂಕಿನ ಖಾಸಗಿ ಬಸ್ ಏಜೆಂಟರುಗಳ ಕೋರಿಕೆಯ ಮೇರೆಗೆ 116 ಮಂದಿಗೆ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಗುರುವಾರ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.

ಈ ವೇಳೆ ಸ್ವಾಮಿ ಜಪಾನಂದಜೀ ರವರು ಕೊರೊನಾ ಹೆಮ್ಮಾರಿಯನ್ನು ಗೆಲ್ಲುವ ಮೂರು ಸೂತ್ರಗಳ ಬಗ್ಗೆ ತಿಳಿಸಿ, ನಮ್ಮ ನಾಡನ್ನು ಕೊರೊನಾ ಮುಕ್ತ ನಾಡನ್ನಾಗಿಸುವ ಪ್ರತಿಜ್ಞೆಯನ್ನು ತೊಟ್ಟು ಪ್ರತಿಯೊಬ್ಬರೂ ಈ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಿನನಿತ್ಯದಲ್ಲಿ ವ್ಯವಹರಿಸಬೇಕೆಂದು ಹೇಳಿದರು. ಎಲ್ಲಾ ಖಾಸಗಿ ಬಸ್ ಏಜೆಂಟರುಗಳು ಶಿಸ್ತು ಬದ್ಧವಾಗಿ, ವ್ಯಕ್ತಿಗತ ಅಂತರವನ್ನು ಕಾಪಾಡಿಕೊಂಡು, ಮುಖಗವಸು ಧರಿಸಿ ಸಾಲಾಗಿ ನಿಂತು ಕಿಟ್ ಸ್ವೀಕರಿಸಿದರು.

      ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಸುದೇಶ್ ಬಾಬು ಹಾಗೂ ಹಿರಿಯ ವಕೀಲ ಯಜ್ಞನಾರಾಯಣ ಶರ್ಮ ಹಾಗೂ ವಿವೇಕ ಬ್ರಿಗೇಡಿನ ಸದಸ್ಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link