ದಾವಣಗೆರೆಗೆ ಕೀರ್ತಿ ತಂದ ಸಂಜಯ್

ದಾವಣಗೆರೆ :

ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜು, ದಾವಣಗೆರೆ ಇಲ್ಲಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಕು. ಸಂಜಯ್ ಜಿ. ಸಿ. ಅವರು ರಾಜಸ್ಥಾನದ ಉದಯ್ ಪುರ್ ನಲ್ಲಿ ನಡೆದ ನ್ಯಾಷಿನಲ್ ಜಂಪ್ ರೋಪ್ ಚಾಂಪಿಯನ್ ಶಿಪ್ 2021 ರಲ್ಲಿ ವೈಯುಕ್ತಿಕ ಹಾಗೂ ತಂಡದ ವಿಭಾಗದಲ್ಲಿ ಬಂಗಾರ ಹಾಗೂ ಬೆಳ್ಳಿ ಪದಕ ಪಡೆದು ನೂತನ ಸಾಧನೆ ಮೆರೆದು ರಾಜ್ಯ ಹಾಗೂ ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಮೂಲತಃ ಕೊಪ್ಪಳ ಜಿಲ್ಲೆ ಕಾರಟಗಿರಿಯ ದಂಪತಿಗಳಾದ ಚಂದ್ರಮೌಳಿ ಹಾಗೂ ಶ್ರೀಮತಿ ಉಮಾದೇವಿ ಸುಪತ್ರರಾದ ಇವರು ದಾವಣಗೆರೆಯಲ್ಲಿ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರ ಜೊತೆಗೆ ವಿಶಿಷ್ಟವಾದ ಹಾಗೂ ಅಪರೂಪವೆನಿಸಿದ “ಜಂಪ್ ರೋಪ್” ಸ್ಪರ್ಧೆಯಲ್ಲಿ ಕಠಿಣ ಪರಿಶ್ರಮದೊಂದಿಗೆ ತೊಡಗಿಸಿಕೊಂಡು ಈ ಸಾಧನೆ ಮೆರೆದಿರುತ್ತಾರೆ. ಓದಿನಲ್ಲೂ ಉತ್ತಮ ಪ್ರಯತ್ನ ಮಾಡುತ್ತಿರುವ ಈ ವಿದ್ಯಾರ್ಥಿಯು ಸಾಧನೆಯಿಂದ ರಾಜ್ಯ ಹಾಗೂ ದಾವಣಗೆರೆ ಜಿಲ್ಲೆಗೆ ಹೆಮ್ಮೆ ತಂದವರಾಗಿರುತ್ತಾರೆ.

ಗಾಂಧೀ ಜಯಂತಿ’ಯ ಶುಭ ಸಮಾರಂಭದಲ್ಲಿ ಈ ವಿದ್ಯಾರ್ಥಿಯನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ, ಅಭಿಂನಂದಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದರ್ಶಿಗಳಾದ ವಿನಯ್ ವೈ ವಿ ಅವರು ಮಾತನ್ನಾಡಿ, `ಸಾಧಿಸುವ ಛಲವಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಈ ವಿದ್ಯಾರ್ಥಿ ಉತ್ತಮ ಉದಾಹರಣೆ. ವಿಜ್ಷಾನ ವಿಷಯವನ್ನು ಆಯ್ದುಕೊಂಡ ಈತ ಓದಿನ ಒತ್ತಡದ ನಡುವೆಯೂ ತಮ್ಮ ಅಸಾಧಾರಣ ಪ್ರತಿಭೆಯನ್ನು ಪೆÇೀಷಿಸಿಕೊಂಡು ಬಂದು, ಇಂದು ಉತ್ತಮ ಸಾಧನೆ ಮೆರೆದಿದ್ದಾನೆ. ಇಂತಹ ವಿದ್ಯಾರ್ಥಿ ನಮ್ಮ ಸಂಸ್ಥೆಯಲ್ಲಿ ಓದುತ್ತಿದ್ದಾನೆ ಎಂಬುದು ನಮಗೆ ಹೆಮ್ಮೆಯ ಸಂಗತಿಯಗಿದೆ. ಇಂದು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಈ ವಿದ್ಯಾರ್ಥಿ ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ. ಒಲಂಪಿಕ್ಸ್ ನಲ್ಲಿಯೂ ಕೂಡಾ ಸಾಧನೆ ಮಾಡುವಂತಾಗಲಿ’ ಎಂದು ಹಾರೈಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link