- ಎಸ್.ಹರೀಶ್ ಆಚಾರ್ಯ
ತುಮಕೂರು
ಜಿಎಸ್ಟಿ ಜಾರಿಯಾದ ಬಳಿಕ ರಾಜ್ಯದಿಂದ ಕೇಂದ್ರಕ್ಕೆ ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹ ಹೆಚ್ಚು ಪಾವತಿವಾಗುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು ಹಂಚಿಕೆಯಾಗದಿರುವುದು ಮುಖ್ಯಮಂತ್ರಿಗಳೇ ವಿಧಾನಪರಿಷತ್ ಸದಸ್ಯರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಬಹಿರಂಗಗೊAಡಿದೆ.
ಹೌದು ಕಳೆದ ಮಾ.೧೦ ರಂದು ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಅವರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ೧೪೬೧ರಲ್ಲಿ ಜಿಎಸ್ಟಿ, ತೆರಿಗೆ ಹಂಚಿಕೆ, ಪರಿಹಾರ ಸೆಸ್ಗಳ ಬಗ್ಗೆ ಐದು ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಎಸ್ಟಿ ತೆರಿಗೆ (ನಷ್ಟ ಪರಿಹಾರವನ್ನು ಒಳಗೊಂಡAತೆ) ಸಂಗ್ರಹ ೨೦೧೮-೧೯ರಲ್ಲಿ ೫೨,೧೬೭,೨೦ ಕೋಟಿ ರೂ., ೨೦೧೯-೨೦ರಲ್ಲಿ ೫೭,೫೨೨.೭೪ ಕೋಟಿ ರೂ., ೨೦೨೦-೨೧ರಲ್ಲಿ ೬೪.೫೨೭.೫೭ ಕೋಟಿ ರೂ. ಹಾಗೂ ೨೦೨೧-೨೨ರಲ್ಲಿ(ಫೆ.೨೨ ಅಂತ್ಯದವರೆಗೆ) ೭೦,೧೦೮.೬೮ ಕೋಟಿ ರೂ.ಗಳಷ್ಟು ಕೇಂದ್ರ ಸರಕಾರದ ಕ್ರೂಢೀಕರಿಸಿದ ನಿಧಿಗೆ ನೇರವಾಗಿ ಜಿಎಸ್ಟಿ ಮುಖೇನ ಸಂಗ್ರಹವಾಗಿದೆ ಎಂದು ಉತ್ತರಿಸಿದ್ದಾರೆ.
ಈ ಅಂಕಿಅAಶದನ್ವಯ ಕಳೆದ ಮೂರು ವರ್ಷಗಳಲ್ಲಿ ತೆರಿಗೆ ಸಂಗ್ರಹ ಮೊತ್ತ ಹೆಚ್ಚಳವಾಗಿದ್ದು, ಕೋವಿಡ್ನ ಎರಡು ವರ್ಷಗಳಲ್ಲೂ ಜಿಎಸ್ಟಿ ಸಂಗ್ರಹದಲ್ಲಿ ಇಳಿಕೆಯಾಗಿಲ್ಲ, ಆದರೆ ಕೇಂದ್ರ ಸರಕಾರದಿಂದ ತೆರಿಗೆ ಹಂಚಿಕೆ ಮೊತ್ತ ಮಾತ್ರ ರಾಜ್ಯಕ್ಕೆ ಇಳಿಮುಖವಾಗಿರುವ ಅಂಕಿ-ಅAಶಗಳಲ್ಲಿ ವೇದ್ಯವಾಗಿದೆ. ಕೇಂದ್ರ ಸರಕಾರದಿಂದ ತೆರಿಗೆ ಹಂಚಿಕೆಯಲ್ಲಿ ೨೦೧೮-೧೯ರಲ್ಲಿ ೩೫,೮೯೫ ಕೋಟಿ, ೨೦೧೯-೨೦ರಲ್ಲಿ ೩೦,೯೧೯ ಕೋಟಿ, ೨೦೨೦-೨೧ರಲ್ಲಿ ೨೧,೬೯೪ ಕೋಟಿ ಹಂಚಿಕೆ ಮಾಡಿದ್ದು, ಸಹಾಯಧನದಲ್ಲೂ ಸಗ ಏಕರೂಪತೆ, ಹೆಚ್ಚಳವಾಗಲಿ ಕಂಡುಬAದಿಲ್ಲ. ಕೇಂದ್ರದ ಸಹಾಯಧನ ೨೦೧೮-೧೯ರಲ್ಲಿ ೧೪,೭೨೭ ಕೋಟಿ, ೨೦೧೯-೨೦ರಲ್ಲಿ ೧೯,೯೮೩ ಕೋಟಿ, ೨೦೨೦-೨೧ರಲ್ಲಿ ೧೬, ೨೮೭ ಕೋಟಿ ಹಂಚಿಕೆ ಮಾಡಿರುವುದು ಕಂಡುಬAದಿದೆ.
2 ವರ್ಷದಲ್ಲೇ ರಾಜ್ಯ 50,515 ಕೋಟಿ ಸಾಲಗಾರ: ಇನ್ನೂ ಜಿಎಸ್ಟಿ ಪರಿಹಾರ ಸೆಸ್ ರೂಪದಲ್ಲಿ ದೊರೆತಿರುವ ಮೊತ್ತದ ಬಗೆಗಿನ ಪ್ರಶ್ನೆಗೆ 2018-19ರಲ್ಲಿ ೧೦,೭೫೪ ಕೋಟಿ, ೨೦೧೯-೨೦ರಲ್ಲಿ ೧೪, ೪೯೬ .೭೩ ಕೋಟಿ ರಾಜ್ಯಕ್ಕೆ ಜಿಎಸ್ಟಿ ನಷ್ಟ ಪರಿಹಾರ ಬಂದಿದೆ ಎಂದು ಸಿಎಂ ಲಿಖಿತವಾಗಿ ಉತ್ತರಿಸಿದ್ದಾರೆ. ೨೦೨೦-೨೧ನೇ ಸಾಲಿನಿಂದ ಜಿಎಸ್ಟಿ ನಷ್ಟ ಪರಿಹಾರದ ಜೊತೆಗೆ ಸಾಲವನ್ನು ಸಹ ಕೇಂದ್ರ ಕೊಡಮಾಡುತ್ತಿದ್ದು, ೨೦೨೧-೨೨ನೇ ಸಾಲಿಗೆ ೧೩,೭೮೯.೨೫ ಕೋಟಿ ಜಿಎಸ್ಟಿ ಪರಿಹಾರ ಹಾಗೂ ೧೨,೪೦೭ ಕೋಟಿ ಸಾಲದ ಮೊತ್ತ ಸೇರಿ ೨೬,೧೯೬.೨೫ಕೋಟಿ ರಾಜ್ಯಕ್ಕೆ ಲಭ್ಯವಾಗಿದೆ. ೨೦೨೧-೨೨ನೇ ಸಾಲಿಗೆ ಫೆಬ್ರವರಿ ೨೨ರವರೆಗೆ ರಾಜ್ಯಕ್ಕೆ ೭,೧೫೮ .೩೮ ಕೋಟಿ ಜಿಎಸ್ಟಿ ಪರಿಹಾರ ದೊರೆತಿದ್ದು, ೧೮,೧೦೮.೯೧ ಕೋಟಿ ಸಾಲ ಸೇರಿ ೨೫,೨೬೭.೨೯ ಕೋಟಿ ರಾಜ್ಯಕ್ಕೆ ದೊರೆತಿದೆ. ಆದರೆ ಎರಡೇ ವರ್ಷಗಳಲ್ಲಿ ಕರ್ನಾಟಕ ಕೇಂದ್ರಕ್ಕೆ ೩೦,೫೧೫.೯೧ ಕೋಟಿ ಸಾಲಗಾರರಾಗಿರುವುದು ಅಂಕಿ-ಅAಶಗಳಿAದಲೇ ಸಾಬೀತಾಗಿದೆ.
ಜಿಎಸ್ಟಿ ಪರಿಹಾರವನ್ನೂ ಇನ್ನೂ ೩ ವರ್ಷಗಳ ಕಾಲ ಮುಂದುವರಿಸುವುದು ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಪತ್ರ ಬರೆದಿರುವುದಾಗಿ ಸಹ ಮುಖ್ಯಮಂತ್ರಿ ವಿಧಾನಪರಿಷತ್ ಸದಸ್ಯರಿಗೆ ಸ್ಪಷ್ಟಪಡಿಸಿದ್ದಾರೆ.
