ಮೂರು ನಾಗರಹಾವುಗಳ ಜತೆ ಯುವಕನ ಹುಚ್ಚಾಟ, ನಂತರ ನಡೆದದ್ದು ದುರಂತ!

ಉತ್ತರಕನ್ನಡ: 

ಯುವಕನೋರ್ವ ಮೂರು ಹಾವುಗಳೊಂದಿಗೆ ಹುಚ್ಚಾಟ ನಡೆಸಿ ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ವೇಳೆ ಒಂದು ಹಾವಿನಿಂದ ಕಚ್ಚಿಸಿಕೊಂಡ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವು ಕಡಿತಕ್ಕೊಳಗಾದ ಉರಗಪ್ರೇಮಿ ಶಿರಸಿ ನಗರದ ಮಾಜ್ ಸಯ್ಯದ್ (21), ಮೂರು ನಾಗರಹಾವುಗಳೊಂದಿಗೆ ವಿಡಿಯೋ ಮಾಡುವ ವೇಳೆ ಈ ಘಟನೆ ನಡೆದಿದೆ.

ಕಳೆದ ಭಾನುವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾವುಗಳನ್ನ ರಕ್ಷಣೆ ಮಾಡಿ ಬಿಡುವ ಮುನ್ನ ವಿಡಿಯೋ ಮಾಡುತ್ತಿದ್ದ ಸಯ್ಯದ್, ಹಾವುಗಳ ಎದುರು ಕುಳಿತು ಮಾತನಾಡುತ್ತಿದ್ದ ವೇಳೆ ಏಕಾಏಕಿ ಒಂದು ನಾಗರಹಾವು ಕಚ್ಚಿದೆ.

‘ಕಾಶ್ಮೀರ ಫೈಲ್ಸ್’ ಚಿತ್ರವು ಹಿಂಸಾಚಾರವನ್ನು ವೈಭವೀಕರಿಸಿದೆ: ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್

ಹಾವು ಕಡಿತದ ತೀವ್ರತೆಗೆ ಪ್ರಜ್ಞಾಹೀನನಾಗಿದ್ದ ಯುವಕನಿಗೆ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 38 ಡೋಸ್ ಆಯಂಟಿ ವೇನಮ್ ನೀಡಿದ ಬಳಿಕ ಸಯ್ಯದ್ ಚೇತರಿಸಿಕೊಂಡಿದ್ದು, ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಕಳೆದ 9 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಸಯ್ಯದ್, ಇದುವರೆಗೆ 3 ಸಾವಿರಕ್ಕೂ ಅಧಿಕ ನಾಗರಹಾವುಗಳ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಹಾವುಗಳ ಕುರಿತು ಮಾಹಿತಿ ಹಂಚಿಕೊಳ್ಳುವ ವೇಳೆ ಈ ದುರ್ಘಟನೆ ನಡೆದಿದೆ.

‘ರಷ್ಯಾ -ಉಕ್ರೇನ್ ಕದನ ಅಂತ್ಯಕ್ಕೆ ರಾಜತಾಂತ್ರಿಕ ಮಾತುಕತೆಗೆ ಸಿದ್ಧ’ – ಭಾರತ

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link