ಬಾಲಕನ ಮೇಲೆ ದೌರ್ಜನ್ಯ ಪ್ರಕರಣ, ಒಬ್ಬ ಆರೋಪಿಯ ಬಂಧನ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.

ಬೆಂಗಳೂರು:

ಬೆಂಗಳೂರು, ಮಾರ್ಚ್ 25 ಬಸವನ ಬಾಗೇವಾಡಿ ತಾಲೂಕಿನಲ್ಲಿ, ಏಳು ವರ್ಷದ ಬಾಲಕನ ಮೇಲೆ ನಡೆದ ಅಮಾನುಷ, ದೌರ್ಜನ್ಯ ಘಟನೆಯ ಸಂಬಂಧ, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ವಿಧಾನ ಪರಿಷತ್ ಗೆ, ತಿಳಿಸಿದ್ದಾರೆ.

ಸದನದ, ಶೂನ್ಯ ವೇಳೆಯಲ್ಲಿ, ಕಾಂಗ್ರೆಸ್ ಸದಸ್ಯ ಶ್ರೀ ಪ್ರಕಾಶ್ ರಾಥೋಡ್, ಅವರಿಗೆ ಉತ್ತರಿಸಿದ ಸಚಿವರು, ಸಾಮಾಜಿಕ ಜಾಲ ತಾಣ ದಲ್ಲಿ ಈ ಘಟನೆ ಕುರಿತು ಪ್ರಕಟವಾಗಿದೆ, ಹಾಗೂ ಜಿಲ್ಲಾ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ, ಎಂದರು.

ಮೈಸೂರು ಜಿಲ್ಲೆಯ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನುಗಳ ಪೈಕಿ ಮೂರು ವರ್ಷದಲ್ಲಿ 232 ಕೈಗಾರಿಕೆಗಳಿಗೆ ಹಂಚಿಕೆ: ಸಚಿವ ನಿರಾಣಿ

ಪ್ರಕರಣದ ಬಗ್ಗೆ ತೀವ್ರ ನೋವಾಗಿದೆ, ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಎಂದರು.ವಿರೋಧ ಪಕ್ಷದ ನಾಯಕ ಶ್ರೀ B K ಹರಿಪ್ರಸಾದ್ ಸಹ ಮಾತನಾಡಿ, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು.

ಸಭಾ ಪತಿ ಸ್ಥಾನದಲ್ಲಿದ್ದ ಶ್ರೀಮತಿ ತೇಜಸ್ವಿನಿ ಗೌಡ ರವರೂ, ದನಿಗೂಡಿಸಿ, ಇಂಥ ಅಮಾನವೀಯ ಪ್ರಕರಣ ಗಳು ನಡೆಯಬಾರದು, ಎಂದು ಹೇಳಿದರು.

‘ಉಭಯ ಸದನ’ಗಳಲ್ಲಿ ‘ಮೇಕೆದಾಟು ಯೋಜನೆ’ ಕುರಿತ ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link