ಗಾಂಧೀನಗರ:
ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನಾಪಘಾತದಲ್ಲಿ ವಿಮಾನದಲ್ಲಿದ್ದ 242 ರ ಪೈಕಿ 241 ಜನರು ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯೊಬ್ಬರು ಪವಾಡ ಎನ್ನುವಂತೆ ಬದುಕುಳಿದಿದ್ದಾರೆ. ಬದುಕುಳಿದ ವ್ಯಕ್ತಿ 11A ಸೀಟಿನ ಪ್ರಯಾಣಿಕ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ತಿಳಿಸಿದ್ದಾರೆ. ವಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬ್ರಿಟಿಷ್ ಪ್ರಜೆ ವಿಶ್ವಶ್ ಕುಮಾರ್ ರಮೇಶ್, ಬೋಯಿಂಗ್ 787-8 ಡ್ರೀಮ್ಲೈನರ್ ಒಳಗೆ ಬೇರೆ ಸಾಲಿನಲ್ಲಿದ್ದ ತನ್ನ ಸಹೋದರ 45 ವರ್ಷದ ಅಜಯ್ ಕುಮಾರ್ ರಾಕೇಶ್ ಅವರೊಂದಿಗೆ ಬ್ರಿಟನ್ಗೆ ಹಿಂದಿರುಗುತ್ತಿದ್ದರು. ಅವರ ಸಹೋದರ ಮೃತಪಟ್ಟಿದ್ದಾರೆ.
ಟೇಕ್ ಆಫ್ ಆದ ಮೂವತ್ತು ಸೆಕೆಂಡುಗಳ ನಂತರ, ದೊಡ್ಡ ಶಬ್ದ ಕೇಳಿಸಿತು ಮತ್ತು ನಂತರ ವಿಮಾನ ಅಪಘಾತಕ್ಕೀಡಾಯಿತು. ಇದೆಲ್ಲವೂ ತುಂಬಾ ಬೇಗನೆ ಸಂಭವಿಸಿತು ಎಂದು ಅವರು ಹೇಳಿಕೆ ನೀಡಿದ್ದಾರೆ. ಹೊತ್ತಿ ಉರಿಯುತ್ತಿರುವ ವಿಮಾನದಿಂದ ಹೇಗೆ ತಪ್ಪಿಸಿಕೊಂಡೆ ಎಂಬುದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಅವರ ಎದೆಯ ಮೇಲೆ ಸುಟ್ಟ ಗಾಯಗಳಾಗಿವೆ.
ವಿಶ್ವಶ್ ಕುಮಾರ್ ಅವರ ಸಂಬಂಧಿಕರು ಈ ಕುರಿತು ಮಾತನಾಡಿ, ನಾವು ಅದನ್ನು ಕೇಳಿದ ತಕ್ಷಣ ಆಘಾತಕ್ಕೊಳಗಾಗಿದ್ದೆವು. ತಕ್ಷಣವೇ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಅವರು ಬದುಕಿ ಬಂದಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ. ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಬ್ರಿಟನ್ಗೆ ದೀರ್ಘ ಹಾರಾಟಕ್ಕಾಗಿ ಅದರಲ್ಲಿ ಇಂಧನ ತುಂಬಿತ್ತು. 32 ಸೆಕೆಂಡುಗಳ ಕಾಲ ಹಾರಾಟ ನಡೆಸಿದ ನಂತರ ಅದು ವೈದ್ಯಕೀಯ ಕಾಲೇಜಿನ ವೈದ್ಯರ ಹಾಸ್ಟೆಲ್ಗೆ ಅಪ್ಪಳಿಸಿತು. ಹಾಸ್ಟೆಲ್ನಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 265 ಕ್ಕೇರಿದೆ. ಸದ್ಯ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಆಸ್ಪತ್ರಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಬ್ರಿಟನ್ಗೆ ದೀರ್ಘ ಹಾರಾಟಕ್ಕಾಗಿ ಅದರಲ್ಲಿ ಇಂಧನ ತುಂಬಿತ್ತು. 32 ಸೆಕೆಂಡುಗಳ ಕಾಲ ಹಾರಾಟ ನಡೆಸಿದ ನಂತರ ಅದು ವೈದ್ಯಕೀಯ ಕಾಲೇಜಿನ ವೈದ್ಯರ ಹಾಸ್ಟೆಲ್ಗೆ ಅಪ್ಪಳಿಸಿತು. ಹಾಸ್ಟೆಲ್ನಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
