ಮದುವೆಯಾಗಲು ಒಪ್ಪದ ಪ್ರೇಯಸಿಯನ್ನು ಕಾಲುವೆಗೆ ತಳ್ಳಿ ಕೊಂದ ಪ್ರಿಯಕರ

ಶಿವಮೊಗ್ಗ:

   ಹೆತ್ತವರ ವಿರೋಧ ಎದುರಿಸಿ ನಿನ್ನನ್ನು ಮದುವೆ  ಆಗೊಲ್ಲ ಎಂದು ಹೇಳಿದ ಪ್ರೇಯಸಿಯನ್ನು ಸಿಟ್ಟಿನಿಂದ ಪ್ರಿಯಕರ ಕಾಲುವೆಗೆ ತಳ್ಳಿ ಕೊಲೆ  ಮಾಡಿದ ಬರ್ಬರ ಘಟನೆ ಶಿವಮೊಗ್ಗ  ಜಿಲ್ಲೆಯ ಭದ್ರಾವತಿ ಯಕ್ಕುಂದದಲ್ಲಿ ನಡೆದಿದೆ. ಮದುವೆ ವಿಚಾರವಾಗಿ ಪ್ರೇಮಿಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಭದ್ರಾ ಕಾಲುವೆಗೆ ಪ್ರೇಯಸಿಯನ್ನು ತಳ್ಳಿ ಪ್ರಿಯಕರ ಹತ್ಯೆಗೈಯ್ದಿದ್ದಾನೆ. ಕೊಲೆಯಾದ ಯುವತಿ ತೆರೇನಹಳ್ಳಿಯ ಸ್ವಾತಿ. ಕೊಲೆ ಮಾಡಿದವನು ಸೂರ್ಯ.

   ಸ್ವಾತಿ ಹಾಗೂ ಸೂರ್ಯ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮದುವೆಗೆ ಯುವತಿ ಸ್ವಾತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಇದ್ದರೂ ಕೂಡ ಸ್ವಾತಿಗೆ ತನ್ನನ್ನು ಮದುವೆಯಾಗು ಎಂದು ಸೂರ್ಯ ಕಾಟ ಕೊಟ್ಟಿದ್ದಾನೆ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ, ಸ್ವಾತಿಯನ್ನು ಮಾತಿನಿಂದ ಮರುಳು ಮಾಡಿ ಕರೆದುಕೊಂಡು ಹೋಗಿದ್ದಾನೆ.

   ನಿನ್ನೆ ಸಂಜೆ ಭದ್ರಾ ಕಾಲುವೆಯಲ್ಲಿ ಸ್ವಾತಿಯ ಮೃತ ದೇಹ ಪತ್ತೆಯಾಗಿದೆ. ಯುವತಿ ಸಾವಿನ ಸುತ್ತ ಇದೀಗ ನೂರಾರು ಅನುಮಾನಗಳು ಹುಟ್ಟಿಕೊಂಡಿವೆ. ಮದುವೆ ವಿಚಾರಕ್ಕೆ ಸೂರ್ಯ ಮತ್ತು ಸ್ವಾತಿ ನಡುವೆ ಗಲಾಟೆ ಆಗಿದೆ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಮತ್ತು ಪ್ರೇಯಸಿ ಸ್ವಾತಿ ಗಲಾಟೆ ಮಾಡಿಕೊಂಡಿದ್ದಾರೆ. ಸ್ವಾತಿ ಡಿಗ್ರಿ ಎರಡನೇ ವರ್ಷ ಓದುತ್ತಿದ್ದಳು. ಸ್ವಾತಿಯನ್ನು ಸೂರ್ಯ ಮೋಸದಿಂದ ಕರೆದುಕೊಂಡು ಹೋಗಿದ್ದಾನೆ ಎಂದು ಸೆಪ್ಟೆಂಬರ್ 23ರಂದು ಭದ್ರಾವತಿ ಠಾಣೆಗೆ ಸ್ವಾತಿ ಪೋಷಕರು ದೂರು ನೀಡಿದ್ದಾರೆ.

   ನಿನ್ನೆ ಸ್ವಾತಿ ಶವ ಪತ್ತೆ ಆಗುತ್ತಿದ್ದಂತೆ ಪ್ರಿಯಕರ ಸೂರ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ದೂರು ದಾಖಲಾಗಿದ್ದು ಸ್ವಾತಿ ಪೋಷಕರು ಇಬ್ಬರ ವಿರುದ್ಧ ಕೂಡ ದೂರು ದಾಖಲಿಸಿದ್ದಾರೆ. ಸದ್ಯ ಭದ್ರಾವತಿ ಪೊಲೀಸರು ಸೂರ್ಯ ಮತ್ತು ತಂದೆ ಸ್ವಾಮಿಯನ್ನು ಆರೆಸ್ಟ್ ಮಾಡಲಾಗಿದೆ.

Recent Articles

spot_img

Related Stories

Share via
Copy link